ಪ್ರಸ್ತುತ ದೇಶದಲ್ಲಿ ಹಲವಾರು ಮಂದಿ ವಾಟ್ಸಾಪ್ ಬಳಕೆ ಮಾಡುತ್ತಾರೆ. ಹೀಗಿರುವಾಗ ಪ್ರಮುಖ ಸಂಸ್ಥೆಗಳು ತಮ್ಮ ಸೇವೆಯನ್ನು ವಾಟ್ಸಾಪ್ ಮೂಲಕ ನೀಡುತ್ತಿದೆ. ಈಗ ದೇಶದ ಪ್ರಮುಖ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ವಾಟ್ಸಾಪ್ ಸೇವೆಯನ್ನು ಆರಂಭ ಮಾಡಿದೆ.
ಶುಕ್ರವಾರ ಎಲ್ಐಸಿ ಟ್ವಿಟ್ಟರ್ನಲ್ಲಿ ಈ ಬಗ್ಗೆ ಘೋಷಣೆ ಮಾಡಿದೆ. ಎಲ್ಐಸಿ ಪಾಲಿಸಿಯನ್ನು ಹೊಂದಿರುವವರು ಎಲ್ಐಸಿ ಸೇವೆಯನ್ನು ಎಲ್ಐಸಿ ಪೋರ್ಟಲ್ ಬದಲಾಗಿ ವಾಟ್ಸಾಪ್ ಮೂಲಕವೇ ಪಡೆಯಬಹುದು. ನೀವು 8976862090 ಸಂಖ್ಯೆಗೆ HI ಎಂದು ಕಳುಹಿಸುವ ಮೂಲಕ ವಾಟ್ಸಾಪ್ ಸೇವೆಯನ್ನು ಪಡೆಯಬಹುದು.
ಈ ಸೇವೆ ಆರಂಭವಾಗಿರುವುದರಿಂದಾಗಿ ನೀವು ಯಾವುದೇ ಸಣ್ಣ, ದೊಡ್ಡ ಕೆಲಸಕ್ಕೆ ಎಲ್ಐಸಿ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ. ಹಾಗೆಯೇ ಜನರು ಎಲ್ಐಸಿ ಏಜೆಂಟ್ ನಮ್ಮನ್ನು ಭೇಟಿ ಯಾವಾಗ ಆಗುತ್ತಾರೆ ಎಂದು ಕಾಯಬೇಕಾಗಿಲ್ಲ. ನಾವಾಗಿಯೇ ಈ ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಎಲ್ಐಸಿ ಸೇವೆಯನ್ನು ಪಡೆಯಬಹುದು. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ವಾಟ್ಸಾಪ್ ಸೇವೆಯನ್ನು ಪಡೆಯುವುದು ಹೇಗೆ?
ಎಲ್ಐಸಿ ಪೋರ್ಟಲ್ನಲ್ಲಿ ಎಲ್ಐಸಿ ಪಾಲಿಸಿಗೆ ರಿಜಿಸ್ಟರ್ ಮಾಡಿದ ಬಳಿಕ ಪಾಲಿಸಿದಾರರು ವಾಟ್ಸಾಪ್ ಸೇವೆಯನ್ನು ಪಡೆಯಬಹುದು. ಅದಕ್ಕಾಗಿ ನೀವು 8976862090 ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಬೇಕು. ವಾಟ್ಸಾಪ್ ಮೂಲಕ 8976862090 ಸಂಖ್ಯೆಗೆ HI ಎಂದು ಕಳುಹಿಸುವ ಮೂಲಕ ಸೇವೆಯನ್ನು ಪಡೆಯುವುದನ್ನು ಆರಂಭಿಸಬಹುದು. ಯಾವೆಲ್ಲ ಸೇವೆ ಲಭ್ಯವಿದೆ ಎಂಬ ಮಾಹಿತಿ ಬರಲಿದೆ. ಅಲ್ಲಿ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡರೆ ನಿಮಗೆ ಅಗತ್ಯವಿರುವ ಮಾಹಿತಿ ಲಭ್ಯವಾಗಲಿದೆ.
ವಾಟ್ಸಾಪ್ನಲ್ಲಿ ಯಾವೆಲ್ಲ ಎಲ್ಐಸಿ ಸೇವೆ ಲಭ್ಯ?
1. ಪ್ರೀಮಿಯಂ ಕೊನೆಯ ದಿನ (Premium due)
2. ಬೋನಸ್ ಬಗ್ಗೆ ಮಾಹಿತಿ (Bonus information)
3. ಪಾಲಿಸಿ ಸ್ಟೇಟಸ್ (Policy status)
4. ಸಾಲದ ಅರ್ಹತಾ ಮಾಹಿತಿ (Loan eligibility quotation)
5. ಸಾಲ ಮರುಪಾವತಿ ಮಾಹಿತಿ (Loan repayment Quotation)
6. ಸಾಲದ ಬಡ್ಡಿದರ ಗಡುವು (Loan interest due
7. ಪ್ರೀಮಿಯಂ ಪಾವತಿ ಪತ್ರ (Premium paid certificate)
8. ULIP -statement of units
9. ಎಲ್ಐಸಿ ಸರ್ವಿಸ್ ಲಿಂಕ್ (LIC services links)
10. Opt in/Opt out Services
11. End conversation
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications