ಬೆಂಗಳೂರು, ಜುಲೈ 10: ಉದ್ಯಮಶೀಲತೆಯ ಪ್ರಗತಿಗೆ ಭಾರತದ ಶ್ರೇಷ್ಠ ಮತ್ತು ಮುಂಚೂಣಿಯ ಬಿಸಿನೆಸ್ ಸ್ಕೂಲ್/ಸಂಸ್ಥೆಗಳಲ್ಲಿ ಆಂತ್ರಪ್ರಿನ್ಯೂರ್ಶಿಪ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಇಡಿಐಐ ಒಂದಾಗಿದೆ. ಉದ್ಯಮ ಮಾಲೀಕರಿಗೆ ವೈವಿಧ್ಯಮಯ ಕೋರ್ಸ್ಗಳನ್ನು ಒದಗಿಸುತ್ತಿದೆ. ಈ ಧ್ಯೇಯೋದ್ದೇಶದ ಅಡಿಯಲ್ಲಿ 1 ಮಿಲಿಯನ್ ಹೊಸ ವ್ಯಾಪಾರಗಳು ಮತ್ತು ಉದ್ಯಮಗಳನ್ನು ಸೃಷ್ಟಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ.
ಇಡಿಐಐ ಡೈರೆಕ್ಟರ್ ಜನರಲ್ ಡಾ.ಸುನಿಲ್ ಶುಕ್ಲಾ ಈ ಉಪಕ್ರಮವನ್ನು ಜುಲೈ 12ರಂದು ಬೆಂಗಳೂರಿನ ಡಿಕನ್ಸನ್ ರಸ್ತೆಯ ಮಣಿಪಾಲ್ ಸೆಂಟರ್ನಲ್ಲಿರುವ ಹೋಟೆಲ್ ರಾಯಲ್ ಆರ್ಕಿಡ್ ಸೆಂಟ್ರಲ್ನಲ್ಲಿ ನಡೆಯಲಿರುವ ಸಿಎಸ್ಆರ್ ಲೀರ್ಸ್ ರೌಂಡ್ಟೇಬಲ್ ಸಭೆಯಲ್ಲಿ ಉದ್ಘಾಟಿಸಲಿದ್ದಾರೆ.
ಈ ರೌಂಡ್ಟೇಬಲ್ ಸಭೆಯ ಮುಖ್ಯ ಉದ್ದೇಶ ತಾಜಾ ಪರಿಸರ-ಸ್ನೇಹಿ ಮತ್ತು ತಾಂತ್ರಿಕವಾಗಿ ಪ್ರೇರಿತ ಪ್ರವೃತ್ತಿಗಳು, ಆವಿಷ್ಕಾರಗಳು ಮತ್ತು ರೂಢಿಗಳನ್ನು ಮಹಿಳೆಯರ ಜೀವನೋಪಾಯಗಳು, ಆದಾಯ ಉತ್ಪಾದನೆ ಮತ್ತು ಉದ್ಯಮಶೀಲತೆಯ ಪ್ರಯತ್ನಗಳನ್ನು ಉತ್ತೇಜಿಸುವುದು. ಇಡಿಐಐ ಈ ಗುರಿಯನ್ನು ಸಾಧಿಸಲು ಸಿಎಸ್ಆರ್ಗಳು, ಹೆಚ್ಚುವರಿ ನಿಧಿ ಪೂರೈಕೆದಾರರು, ಸರ್ಕಾರದ ಸಂಸ್ಥೆಗಳು ಮತ್ತಿತರೆ ಪಾಲುದಾರರ ಸದೃಢ ಸಹಯೋಗದಿಂದ ಸಾಧ್ಯ ಎಂಬ ಭರವಸೆ ಹೊಂದಿದೆ.

ಇದು ವಿನೂತನ ಬಗೆಯ, ಶಕ್ತಿಯುತ ಮತ್ತು ವಿಸ್ತಾರವಾಗಬಲ್ಲ ಕಾರ್ಯಕ್ರಮವಾಗಿದ್ದು ಅದು ಇಡೀ ದೇಶವನ್ನು ಒಳಗೊಳ್ಳುತ್ತದೆ. ಇಡಿಐಐ ಯು.ಎನ್.ಎಸ್.ಡಿ.ಜಿ. ಗುರಿಗಳಿಗೆ ಪೂರಕವಾಗಿ ರಾಷ್ಟ್ರೀಯ ಅರ್ಥವ್ಯವಸ್ಥೆಗೆ ಕೊಡುಗೆ ನೀಡುವ ಮತ್ತು ಆದ್ಯತೆಗಳನ್ನು ರೂಪಿಸುಕೊಳ್ಳಲು ಮತ್ತಷ್ಟು ಸುಧಾರಣೆಯ ಭರವಸೆ ಹೊಂದಿದೆ.
ಇಡಿಐಐನ ಡೈರೆಕ್ಟರ್ ಜನರಲ್ ಡಾ.ಸುನಿಲ್ ಶುಕ್ಲಾ, ''ಇಡಿಐಐನ ಈ ಉಪಕ್ರಮವು ದೇಶಾದ್ಯಂತ ಮಹಿಳಾ ಉದ್ಯಮಿಗಳಿಗೆ ಹಲವಾರು ಅವಕಾಶಗಳನ್ನು ಸೃಷ್ಟಿಸಲಿದೆ. ಇಡಿಐಐ ಉದ್ಯಮಶೀಲತೆಯ ಕೋರ್ಸ್ಗಳನ್ನು ಪೂರೈಸಲು ಮಾತ್ರ ಸೀಮಿತವಾಗಿಲ್ಲ, ಇದು ಭಾರತವನ್ನು ವ್ಯಾಪಾರಕ್ಕೆ ಸನ್ನದ್ಧಗೊಳಿಸುತ್ತದೆ. 1ಎಂ2030 ಧ್ಯೇಯವು 1 ಮಿಲಿಯನ್ ಹೊಸ ವ್ಯಾಪಾರಗಳು ಮತ್ತು ಉದ್ಯಮಗಳನ್ನು ಪ್ರಾರಂಭಿಸುವ ಉದ್ದೇಶ ಹೊಂದಿದ್ದು ಅವು ದೇಶದ ಮಹಿಳೆಯರ ಮಾಲೀಕತ್ವ ಹೊಂದಿರಬೇಕು ಮತ್ತು ದೇಶಾದ್ಯಂತ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಕೂಡಾ ಒದಗಿಸಬೇಕು'' ಎಂದರು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications