ಗೂಗಲ್ ಮಾತೃಸಂಸ್ಥೆ ಅಲ್ಫಾಬೆಟ್ ಹೊಸ ಸಿಇಒ(ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ) ಆಗಿರುವ ಭಾರತ ಮೂಲದ ಸುಂದರ್ ಪಿಚೈ, ಕಂಪನಿ ನೀಡಿರುವಂತಹ ಗುರಿಗಳನ್ನು ಮುಟ್ಟಿದರೆ ಮುಂದಿನ 3 ವರ್ಷಗಳಲ್ಲಿ ಸಂಬಳ ಹೊರತುಪಡಿಸಿ 240 ಮಿಲಿಯನ್ ಅಮೆರಿಕ್ ಡಾಲರ್ (1,707 ಕೋಟಿ 7 ಲಕ್ಷದ 20 ಸಾವಿರ ರುಪಾಯಿ) ಮೌಲ್ಯದ ಷೇರುಗಳ(Stock) ಪ್ರಶಸ್ತಿಯನ್ನು ಪಡೆಯಲಿದ್ದಾರೆ ಎಂದು ಕಂಪನಿಯು ಘೋಷಿಸಿದೆ.
ಅಲ್ಫಾಬೆಟ್ ನೂತನ ಸಿಇಒ ಸುಂದರ್ ಪಿಚೈ್ 2020ರಿಂದ ವಾರ್ಷಿಕವಾಗಿ 2 ಮಿಲಿಯನ್ ಅಮೆರಿಕನ್ ಡಾಲರ್(14 ಕೋಟಿ 22ಲಕ್ಷ 56 ಸಾವಿರ) ಸಂಬಳ ಪಡೆಯುವುದರ ಜೊತೆಗೆ ಮುಂದಿನ 3 ವರ್ಷದಲ್ಲಿ ಕಂಪನಿಯ ಟಾರ್ಗೆಟ್ ಮುಟ್ಟಿಸಿದರೆ 1,707 ಕೋಟಿ ರುಪಾಯಿಗೂ ಅಧಿಕ ಮೊತ್ತದ ಸ್ಟಾಕ್ ಪ್ರಶಸ್ತಿ ಪಡೆಯಲಿದ್ದಾರೆ.

ಅಲ್ಫಾಬೆಟ್ ಷೇರುಗಳು S&P 100 ಸೂಚ್ಯಂಕವನ್ನು ಮೀರಿಸಿದರೆ ಪಿಚೈ ಹೆಚ್ಚುವರಿ 90 ಮಿಲಿಯನ್ ಅಮೆರಿಕನ್ ಡಾಲರ್ (640 ಕೋಟಿ 15 ಲಕ್ಷ 20 ಸಾವಿರ) ಸ್ಟಾಕ್ ಪ್ರಶಸ್ತಿ ಪಡೆಯಲಿದ್ದಾರೆ. ಕಂಪನಿಯು ಇದೇ ಮೊದಲ ಬಾರಿಗೆ ಕಾರ್ಯಕ್ರಮತೆ (Performance) ಆಧಾರದ ಮೇಲೆ ಸ್ಟಾಕ್ ಪ್ರಶಸ್ತಿಗಳನ್ನು ನೀಡುತ್ತಿದೆ.
ಇತ್ತೀಚೆಗಷ್ಟೇ ಗೂಗಲ್ನ ಮಾತೃಸಂಸ್ಥೆ ಅಲ್ಫಾಬೆಟ್ ಭಾರತೀಯ ಮೂಲದ ಸುಂದರ್ ಪಿಚೈಗೆ ನಾಯಕತ್ವ ಜವಾಬ್ದಾರಿ ವಹಿಸಿತು. ಸಹ ಸಂಸ್ಥಾಪಕರಾದ ಲ್ಯಾರಿ ಪೇಜ್ ಹಾಗೂ ಸೆರ್ಗಿ ಬ್ರಿನ್ ಆಡಳಿತದಿಂದ ಕೆಳಗಿಳಿದ ಬಳಿಕ ಗೂಗಲ್ ಸಿಇಒ ಆಗಿದ್ದ ಸುಂದರ್ ಪಿಚೈ ಜಗತ್ತಿನ ಶಕ್ತಿಶಾಲಿ ಕಾರ್ಪೋರೇಟ್ ಕಂಪನಿಯ ನಾಯಕನಾಗಿದ್ದಾರೆ.
47 ವರ್ಷದ ಸುಂದರ್ ಪಿಚೈ 2015ರಲ್ಲಿ ಗೂಗಲ್ ಸಿಇಓ ಆಗಿ ನೇಮಕಗೊಂಡರು. ಮೂಲತಃ ತಮಿಳುನಾಡಿನ ಮದುರೈನವರಾದ ಸುಂದರ್, ಐಐಟಿ ಖರಗ್ ಪುರ್, ಸ್ಟ್ಯಾನ್ ಫೋರ್ಡ್ ವಿವಿಯ ವಾರ್ಟನ್ ಬಿಜಿನೆಸ್ ಸ್ಕೂಲ್ನಲ್ಲಿ ವ್ಯಾಸಾಂಗ ಮಾಡಿದ್ದಾರೆ. ಇದೀಗ ಗೂಗಲ್ ಜೊತೆಗೆ ಹೆಚ್ಚುವರಿಯಾಗಿ ಅಲ್ಫಾಬೆಟ್ ಸಿಇಒ ಆಗಿಯು ಕಾರ್ಯ ನಿರ್ವಹಿಸುತ್ತಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications