ಬೆಂಗಳೂರಿನಲ್ಲಿ ಸಾಮಾನ್ಯ ಜನರಿಗೆ ಈಗ ಮನೆ ಬಾಡಿಗೆ ಸಿಗುವುದು ಬಹಳ ಸುಲಭ. ಹಲವು ಕಡೆ ಮನೆಗಳು ಬಾಡಿಗೆದಾರರು ಸಿಗದೇ ಖಾಲಿ ಬಿದ್ದಿವೆ. ಇದೇ ಹೊತ್ತಿನಲ್ಲಿ ದೊಡ್ಡ ದೊಡ್ಡ ಮನೆಗಳನ್ನು ಬಾಡಿಗೆಗೆ ಪಡೆಯುವ ಟೆಕ್ಕಿಗಳಿಗೆ ಮನೆಗಳು ಸಿಗದಿರುವ ಪರಿಸ್ಥಿತಿಯೂ ಇದೆ ಎನ್ನುವ ಸುದ್ದಿ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಗೂಗಲ್, ಮಾರ್ಗನ್ ಸ್ಟಾನ್ಲೀ ಇತ್ಯಾದಿ ದೊಡ್ಡ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವ ಜನರಿಗೂ ಬಾಡಿಗೆ ನಿರಾಕರಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಪ್ರಿಯಾಂಶ್ ಜೈನ್ ಎಂಬ ಸಾಫ್ಟ್ವೇರ್ ಎಂಜಿನಿಯರ್ವೊಬ್ಬರು ತಮ್ಮ ಮನೆಬೇಟೆ ಪ್ರಯತ್ನದ ಅನುಭವವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು ಅದೀಗ ವೈರಲ್ ಆಗಿದೆ. ಬೆಂಗಳೂರಿನ ಮನೆ ಮಾಲೀಕರು ಅಳೆದು ತೂಗಿ ಬಾಡಿಗೆ ನೀಡುವ ಪ್ರವೃತ್ತಿ ಹೆಚ್ಚುತ್ತಿರುವುದು ಈ ಟ್ವೀಟ್ನಿಂದ ಗೊತ್ತಾಗುತ್ತದೆ. ಪ್ರಿಯಾಂಶ್ ಜೈನ್ ಮನೆ ಬಾಡಿಗೆ ಪಡೆಯಲು ಬ್ರೋಕರ್ ಜೊತೆ ತಾವು ನಡೆಸಿದ ಸಂಭಾಷಣೆಯನ್ನು ಟ್ವೀಟ್ ಮಾಡಿದ್ದರು.
ಪ್ರಿಯಾಂಶ್ ಜೈನ್ ತಾನು ಆಸ್ಟ್ರೇಲಿಯಾ ಮೂಲದ ಸಾಫ್ಟ್ವೇರ್ ಕಂಪನಿ ಅಟ್ಸಾಸಿಯನ್ನಲ್ಲಿ ಕೆಲಸ ಮಾಡುತ್ತಿದ್ದು, ತಾನು ಸಸ್ಯಾಹಾರಿ ಎಂದು ಹೇಳಿಕೊಂಡರೂ ಬಾಡಿಗೆ ನಿರಾಕರಿಸಲಾದ ಕುತೂಹಲಕಾರಿ ಘಟನೆ ಅದು. ದೊಡ್ಡ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಪ್ರಿಯಾಂಶ್ ಜೈನ್ ಓದಿದ್ದು ತಮಿಳುನಾಡಿನ ವೇಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ. ಈ ವಿಚಾರ ತಿಳಿಯುತ್ತಿದ್ದಂತೆಯೇ ಬ್ರೋಕರ್, 'ಕ್ಷಮಿಸಿ ನಿಮ್ಮ ಪ್ರೊಫೈಲ್ ನಮ್ಮ ಮನೆಮಾಲೀಕರಿಗೆ ಸೂಕ್ತವಾಗಿಲ್ಲ' ಎಂದು ಹೇಳಿದರಂತೆ.

ಆಗ ಜೈನ್, ಯಾವ ರೀತಿಯ ವ್ಯಕ್ತಿಗಳನ್ನು ಮನೆಮಾಲೀಕರು ಹುಡುಕುತ್ತಿದ್ದಾರೆ ಎಂದು ಕೇಳಿದರಂತೆ. ಅದಕ್ಕೆ ಬ್ರೋಕರ್, "ಕೇವಲ ಐಐಟಿ, ಐಐಎಂ. ಸಿಎ ಮತ್ತು ಐಎಸ್ಬಿಗಳಲ್ಲಿ ಓದಿದವರಿಗೆ ಮಾತ್ರ" ಎಂದು ಉತ್ತರಿಸಿದರಂತೆ.
ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳುವಾಗ ಕೆಲ ಹುದ್ದೆಗಳಿಗೆ ಕಂಪನಿಗಳು ಈ ರೀತಿ ಐಐಟಿ, ಐಐಎಂ ಶಿಕ್ಷಿತರನ್ನು ಶಾರ್ಟ್ಲಿಸ್ಟ್ ಮಾಡುವುದನ್ನು ಕೇಳಿದ್ದೇವೆ. ಆದರೆ, ಬಾಡಿಗೆ ಕೊಡಲು ಮನೆಮಾಲೀಕರು ಇಂಥ ಡಿಮ್ಯಾಂಡ್ ಇಟ್ಟುಕೊಂಡಿರುತ್ತಾರೆ ಎಂಬುದು ಸಾಮಾನ್ಯ ಬೆಂಗಳೂರಿಗರಿಗೆ ಹೊಸ ಅನುಭವ.
ಆರ್ನವ್ ಗುಪ್ತಾ ಎಂಬ ಮತ್ತೊಬ್ಬ ಎಂಜಿನಿಯರ್ ಕೂಡ ಇದೇ ರೀತಿಯ ಅನುಭವವೊಂದನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.
"ಬೆಂಗಳೂರಿಗೆ ಬಂದು ಬಾಡಿಗೆ ಹುಡುಕುವಾಗ ಮನೆ ಮಾಲೀಕರು ನಮ್ಮ ಲಿಂಕ್ಡ್ ಇನ್ ಪ್ರೊಫೈಲ್ಗಳನ್ನು ಕೇಳುತ್ತಾರೆ. ಇದೆಂಥ ವರ್ತನೆ?" ಎಂದು ಆಶ್ಚರ್ಯಚಕಿತರಾಗಿ ಕೇಳುತ್ತಾರೆ.
ಇನ್ನು ಕೆಲವರು ಸ್ಯಾಲರಿ ಸ್ಲಿಪ್ಗಳನ್ನು ಕೇಳಿದ್ದಾರೆ. ವಯಸ್ಸು, ಗರ್ಲ್ಫ್ರೆಂಡ್ಸ್ ಎಲ್ಲಾ ವಿಚಾರಿಸಿ ಕೊನೆಗೆ ಬಾಡಿಗೆ ಕೊಡಲು ಒಪ್ಪದವರು ಇದ್ದಾರೆ. ಮೋಹಿತ್ ಠಾಕೂರ್ ಎಂಬುವರು ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಹೇಳಿದ್ದಾರೆ. ಗೂಗಲ್, ಜೆಪಿ ಮಾರ್ಗನ್ನಲ್ಲಿ ಕೆಲಸ ಮಾಡಿದ್ದರೂ ಮನೆ ಮಾಲೀಕರಿಗೆ ಸಮಾಧಾನ ತರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
More From GoodReturns

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications