ಈ ವರ್ಷದ ಡಿಸೆಂಬರ್ ನಿಂದ ದೆಹಲಿ- ಶಿಕಾಗೋ ಮಧ್ಯೆ ಪ್ರತಿ ನಿತ್ಯ ವಿಮಾನ ಹಾರಾಟ ಸೇವೆ ಆರಂಭ ಮಾಡಲಾಗುವುದು. ಇನ್ನು ಮುಂದಿನ ವರ್ಷದಿಂದ ಬೆಂಗಳೂರು- ಸ್ಯಾನ್ ಫ್ರಾನ್ಸಿಸ್ಕೋ ಮಾರ್ಗದಲ್ಲಿ ವಿಮಾನ ಹಾರಾಟ ನಡೆಯಲಿದೆ ಎಂದು ಯುನೈಟೆಡ್ ಏರ್ ಲೈನ್ಸ್ ಗುರುವಾರ ಹೇಳಿದೆ.
"ನವದೆಹಲಿ ಮತ್ತು ಮುಂಬೈನಿಂದ ನ್ಯೂಯಾರ್ಕ್ ಹಾಗೂ ನವದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ಯಾನದ ಸೇವೆ ಜತೆಗೆ ಯುನೈಟೈಡ್ ಏರ್ ಲೈನ್ಸ್ ನಿಂದ ಇನ್ನಷ್ಟು ತಡೆರಹಿತ (ನಾನ್ ಸ್ಟಾಪ್) ಸೇವೆಯನ್ನು ಭಾರತದಿಂದ ಒದಗಿಸಲಾಗುವುದು. ಯು.ಎಸ್.ನ ಬೇರೆ ಯಾವುದೇ ವಿಮಾನ ಯಾನ ಸಂಸ್ಥೆ ಇಷ್ಟು ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸುತ್ತಿಲ್ಲ" ಎಂದು ಏರ್ ಲೈನ್ಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಬೋಯಿಂಗ್ 787- 9 ಡ್ರೀಮ್ ಲೈನರ್ ವಿಮಾನವು ದೆಹಲಿ- ಶಿಕಾಗೋ ಹಾಗೂ ಬೆಂಗಳೂರು- ಸ್ಯಾನ್ ಫ್ರಾನ್ಸಿಸ್ಕೋ ಮಾರ್ಗದಲ್ಲಿ ಹಾರಾಟಕ್ಕೆ ಬಳಸಲಾಗುತ್ತದೆ. ಯುನೈಟೆಡ್ ನ ಅಂತರರಾಷ್ಟ್ರೀಯ ಮಾರಾಟದ ಮ್ಯಾನೇಜಿಂಗ್ ಡೈರೆಕ್ಟರ್ ಮಾರ್ಕೆಲ್ ಫ್ಯುಚ್ಸ್ ಮಾತನಾಡಿ, ಬೆಂಗಳೂರು ಹಾಗೂ ಸ್ಯಾನ್ ಫ್ರಾನ್ಸಿಸ್ಕೋ ಮಧ್ಯೆ ತಡೆರಹಿತವಾದ ಮೊದಲ ವಿಮಾನ ಯಾನ ಆರಂಭಿಸುತ್ತಿರುವುದಕ್ಕೆ ಹೆಮ್ಮೆ ಆಗುತ್ತಿದೆ. ಈ ಮೂಲಕ ವ್ಯಾಪಾರೋದ್ಯಮ ಹಾಗೂ ಪ್ರವಾಸಿಗರಿಗೆ ಅನುಕೂಲ ಆಗಲಿದೆ ಎಂದಿದ್ದಾರೆ.

ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಮಾರ್ಚ್ 23ನೇ ತಾರೀಕಿನಿಂದ ನಿಗದಿತ ವೇಳಾಪಟ್ಟಿಯ ಅಂತರರಾಷ್ಟ್ರೀಯ ವಿಮಾನ ಹಾರಾಟವನ್ನು ಅಮಾನತು ಮಾಡಲಾಗಿದೆ. ಮೇ ತಿಂಗಳಿಂದ ಈಚೆಗೆ ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿಶೇಷ ವಿಮಾನಗಳು ಹಾರಾಟ ನಡೆಸುತ್ತಿದ್ದು, ಅಂತರರಾಷ್ಟ್ರೀಯ ಪ್ರಯಾಣಿಕರಿಗಾಗಿ ಈ ವ್ಯವಸ್ಥೆ ಮಾಡಲಾಗಿದೆ. ಏರ್ ಬಬಲ್ ವ್ಯವಸ್ಥೆ ಅಡಿಯಲ್ಲಿ ಭಾರತ ಹಾಗೂ ಕೆಲ ದೇಶಗಳ ಜತೆ ಜುಲೈನಲ್ಲಿ ದ್ವಿಪಕ್ಷೀಯ ಒಪ್ಪಂದವಾಗಿದೆ.
More From GoodReturns

Air India: ಇಂಧನ ಬೆಲೆ ಏರಿಕೆ ಪರಿಣಾಮ ಏರ್ ಇಂಡಿಯಾ ವಿಮಾನ ದರ ಹೆಚ್ಚಳ-ಹೊಸ ಇಂಧನ ಸರ್ಚಾರ್ಜ್ ಘೋಷಣೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!



Click it and Unblock the Notifications