ಕರ್ನಾಟಕದ ಹೊಸ ಕೈಗಾರಿಕೆ ನೀತಿಯಿಂದಾಗಿ 2023ರ ಹೊತ್ತಿಗೆ ರಾಜ್ಯದಲ್ಲಿ 30 ಸಾವಿರ ಕೋಟಿ ರುಪಾಯಿಯಷ್ಟು ಮೊಬೈಲ್ ಫೋನ್ ಉತ್ಪಾದನೆ ಮತ್ತು 1.2 ಲಕ್ಷ ಉದ್ಯೋಗ ಸೃಷ್ಟಿಸುತ್ತದೆ ಎಂದು ಮೊಬೈಲ್ ಹ್ಯಾಂಡ್ ಸೆಟ್ ಅಂಡ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ICEA ಭಾನುವಾರ ಹೇಳಿದೆ.
ಆಗಸ್ಟ್ ನಲ್ಲಿ ಹೊಸ ಕೈಗಾರಿಕೆ ನೀತಿಯನ್ನು (NIP) 2020- 25 ಕರ್ನಾಟಕ ಘೋಷಿಸಿತು. ಅದರಲ್ಲಿ ಮೊಬೈಲ್ ಉತ್ಪಾದನೆಗೆ ಪ್ರೋತ್ಸಾಹಧನ ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಇಂಡಿಯಾ ಸೆಲ್ಯುಲಾರ್ ಅಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್(ICEA)ಗೆ ಆಪಲ್, ವಿನ್ ಸ್ಟ್ರನ್, ಲಾವಾ ಮತ್ತಿತರ ಕಂಪೆನಿಗಳು ಸದಸ್ಯವಾಗಿವೆ.
ಕಂಪೆನಿಗಳ ವಾರ್ಷಿಕ ವಹಿವಾಟಿನ ಒಂದು ಪರ್ಸೆಂಟ್ ನಷ್ಟನ್ನು ಪ್ರೋತ್ಸಾಹಧನ ನೀಡಲಾಗುತ್ತದೆ. ಅದು ಕೂಡ ಐದು ವರ್ಷದ ಅವಧಿಗೆ. ಇದು ಕರ್ನಾಟಕ ಸರ್ಕಾರದ ಸ್ವಾಗತಾರ್ಹ ಹಾಗೂ ದಿಟ್ಟ ನಡೆ ಎಂದು ICEA ಹೇಳಿದೆ.
ಕರ್ನಾಟಕದಲ್ಲಿ 2500 ಕೋಟಿ ಮೌಲ್ಯದ ಮೊಬೈಲ್ ಉತ್ಪಾದನೆ
ಇಂಥ ಆರಂಭದ ಪ್ರಯತ್ನಗಳು ಎಲೆಕ್ಟ್ರಾನಿಕ್ಸ್ ಸಿಸೃಮ್ ಡಿಸೈನ್ ಅಂಡ್ ಮ್ಯಾನುಫ್ಯಾಕ್ಚರಿಂಗ್ (ESDM) ವಲಯ ಬೆಳೆಯಲು ಪ್ರೋತ್ಸಾಹ ನೀಡುತ್ತವೆ. ಸದ್ಯಕ್ಕೆ ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು 1ರಿಂದ 1.5% (2500 ಕೋಟಿ ರುಪಾಯಿ) ಇದೆ. ಇದು 2023ರ ಹೊತ್ತಿಗೆ 7% ಅಥವಾ 30,000 ಕೋಟಿ ರುಪಾಯಿ ದಾಟುತ್ತದೆ ಎಂಬ ನಿರೀಕ್ಷೆ ಇದೆ ಎಂದು ICEA ಅಧ್ಯಕ್ಷ ಪಂಕಜ್ ಮೊಹಿಂದ್ರೂ ಹೇಳಿದ್ದಾರೆ.
2023ರ ಹೊತ್ತಿಗೆ 1.2 ಲಕ್ಷ ಉದ್ಯೋಗ ಸೃಷ್ಟಿ
ಇನ್ನು ಇದರಿಂದ ಉದ್ಯೋಗ ಸೃಷ್ಟಿಗೆ ಸಹಾಯ ಆಗುತ್ತದೆ. 2023ರ ಹೊತ್ತಿಗೆ 1.2 ಲಕ್ಷ ಉದ್ಯೋಗ ಸೃಷ್ಟಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಕರ್ನಾಟಕದ ಗ್ರಾಸ್ ಸ್ಟೇಟ್ ಡೊಮೆಸ್ಟಿಕ್ ಪ್ರಾಡಕ್ಟ್ (SGDP) 16 ಲಕ್ಷ ಕೋಟಿ ರುಪಾಯಿ ಇದೆ. ಭಾರತದ ಚಿಪ್ ಡಿಸೈನರ್ಸ್ ಗಳಲ್ಲಿ 70ರಷ್ಟು ರಾಜ್ಯದಲ್ಲಿ ಇದೆ.
ಹೊಸ ಕೈಗಾರಿಕೆ ನೀತಿಯಡಿ ಹಲವು ಸೌಲಭ್ಯ
ಹೊಸ ಕೈಗಾರಿಕೆ ನೀತಿ ಅಡಿಯಲ್ಲಿ ನೋಂದಣಿ ಹಾಗೂ ಮುದ್ರಾಂಕ ಶುಲ್ಕ, ಭೂ ಪರಿವರ್ತನೆ ಶುಲ್ಕ, ವಿದ್ಯುತ್ ಶುಲ್ಕದಿಂದ ಮರುಪಾವತಿ ಆಗುತ್ತದೆ. 2020ರ ಮೇ ತಿಂಗಳಲ್ಲಿ ಎರಡು ಸಾವಿರದಷ್ಟಿರುವ ಸಿಬ್ಬಂದಿಯನ್ನು ಮುಂದಿನ ಆರ್ಥಿಕ ವರ್ಷದ ಕೊನೆಗೆ ಇಪ್ಪತ್ತು ಸಾವಿರಕ್ಕೆ ಆಲೋಚಿಸುವ ಯೋಜನೆ ಹಾಕಿಕೊಂಡಿದೆ.
More From GoodReturns

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Weather Today: ಮುಂದಿನ ವಾರದಿಂದ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು; ಜನರೇ ಎಚ್ಚರ

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications