ಪಾಟ್ನಾ ಹಾಗೂ ಬೆಂಗಳೂರು ನಡುವೆ ಪ್ರಯಾಣ ಮಾಡುವವರಿಗೆ ಸಿಹಿಸುದ್ದಿ ಇದೆ. ಭಾರತೀಯ ರೈಲ್ವೆ ಬೆಂಗಳೂರು ಹಾಗೂ ಪಾಟ್ನಾ ನಡುವೆ ವಿಶೇಷ ರೈಲನ್ನು ಘೋಷಣೆ ಮಾಡಿದೆ, ಡಿಸೆಂಬರ್ 15, 2022ರಿಂದ ಈ ವಿಶೇಷ ರೈಲು ಆರಂಭವಾಗಲಿದೆ.
ಎರಡು ನಗರಗಳ ನಡುವೆ ಈ ರೈಲನ್ನು ಆರಂಭ ಮಾಡಲಾಗಿದ್ದು ಜನರಿಗೆ ಓಡಾಟಕ್ಕೆ ಇದು ಸಹಾಯವಾಗಿಲಿದೆ. ಭಾರತೀಯ ರೈಲ್ವೆಯು ಈ ರೈಲುಗಳ ಸಮಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರೈಲು ಯಾವ ಸಂದರ್ಭದಲ್ಲಿ ಓಡಾಟ ಆರಂಭ ಮಾಡಲಿದೆ, ಯಾವಾಗ ತಲುಪಲಿದೆ ಎಂಬ ಬಗ್ಗೆ ವಿವರಣೆಯನ್ನು ಕೂಡಾ ನೀಡಿದೆ.
ಮುಂಜಾನೆ ಪಾಟ್ನಾದಿಂದ ಹೊರಡುವ ಈ ರೈಲು ಬೆಂಗಳೂರಿಗೆ ಸಂಜೆಯ ವೇಳೆಗೆ ತಲುಪಲಿದೆ. ಬೇರೆ ಬೇರೆ ಸಮಯದಲ್ಲಿ ರೈಲು ಇರಲಿದೆ. ಇದರಿಂದಾಗಿ ಪ್ರಯಾಣಿಕರು ತಮಗೆ ಬೇಕಾದ ಸಮಯವನ್ನು ಆಯ್ಕೆ ಮಾಡಿಕೊಂಡು ರೈಲನ್ನು ಏರಬಹುದು. ಭಾರತೀಯ ರೈಲ್ವೇ ಮೂರು ವಿಶೇಷ ರೈಲನ್ನು ಆರಂಭ ಮಾಡಿದೆ. ಈ ಮೂರು ರೈಲುಗಳು ಪಾಟ್ನಾ, ಬರೌನಿ, ಮುಝಾಫರ್, ಸಿಕಂದರ್ಬಾದ್, ಹೈದಾರಾಬಾದ್, ಬೆಂಗಳೂರು ನಡುವೆ ಚಲಿಸಲಿದೆ.

ರೈಲಿನ ಸಮಯ ಪಟ್ಟಿ ಇಲ್ಲಿದೆ
* ರೈಲು ಸಂಖ್ಯೆ 03252, ಪಾಟ್ನಾ-ಸಿಕಂದರ್ ವಿಶೇಷ ರೈಲು, ಡಿಸೆಂಬರ್ 15ರಂದು ಪಾಟ್ನಾದಿಂದ ಮಧ್ಯಾಹ್ನ 2:50 (14.50) ಕ್ಕೆ ಹೊರಟರೆ ಮೂರನೇ ದಿನ ಈ ರೈಲು ಬೆಳ್ಳಿಗ್ಗೆ 9 ಗಂಟೆಗೆ ಸಿಕಂದರ್ ತಲುಪಲಿದೆ.
* ರೈಲು ಸಂಖ್ಯೆ 05232, ಬರೌನಿ-ಹೈದಾರಾಬಾದ್ ವಿಶೇಷ ರೈಲು, ಡಿಸೆಂಬರ್ 16ರಂದು ಸಂಜೆ 4 ಗಂಟೆಗೆ ಹೊರಟರೆ, ಮೂರನೇ ದಿನ ಬೆಳ್ಳಿಗ್ಗೆ 09.30 ಗಂಟೆಗೆ ಹೈದಾರಾಬಾದ್ಗೆ ತಲುಪಲಿದೆ.
* ರೈಲು ಸಂಖ್ಯೆ 05227, ಮುಝಾಫರ್-ಬೆಂಗಳೂರು ವಿಶೇಷ ರೈಲು, ಡಿಸೆಂಬರ್ 17ರಂದು ಸಂಜೆ 4 ಗಂಟೆಗೆ ಹೊರಟರೆ, ಮೂರನೇ ದಿನ ಬೆಂಗಳೂರಿಗೆ 6.20 ಗಂಟೆಗೆ (18.20) ತಲುಪಲಿದೆ.
ಈ ವಿಶೇಷ ರೈಲು ಈಸ್ಟ್ ಸೆಂಟ್ರಲ್ ರೈಲ್ವೆ ಆಪರೇಟ್ ಮಾಡುತ್ತದೆ. ಸುಮಾರು 1600 ಕಿಲೋ ಮೀಟರ್ ಸಂಚಾರ ಮಾಡಲಿದೆ. ಈ ರೈಲು ಕೆಲವು ನಿಲ್ದಾಣಗಳಲ್ಲಿ ನಿಲ್ಲಲಿದೆ. ಬಕ್ಸರ್, ಮೊಘಲ್ ಸಾರೈ, ವಾರಾಣಾಸಿ, ಅಲಹಾಬಾದ್, ಕಾನ್ಪುರ, ಝಾನ್ಸಿ, ಬೋಪಲ್, ಇತರ್ಸಿಯಲ್ಲಿ ರೈಲು ನಿಲ್ಲಲಿದೆ. ರೈಲಿನಲ್ಲಿ ಎಸಿ, ನಾನ್ ಎಸ್ ಕೋಚ್ಗಳು ಇರುತ್ತದೆ. ರೈಲಿನಲ್ಲಿ ಪಾಂಟ್ರಿ ಕಾರು, ಆಹಾರ ಹಾಗೂ ಪಾನೀಯಗಳನ್ನು ಜನರು ಖರೀದಿ ಮಾಡಲು ವ್ಯವಸ್ಥೆಗಳು ನಿಲ್ದಾಣಗಳಲ್ಲಿ ಇರಲಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications