ಆದಾಯ ತೆರಿಗೆ ಇಲಾಖೆಯಿಂದ ಭಾರೀ ದೊಡ್ಡ ಕಾರ್ಯಾಚರಣೆ ನಡೆಸಲಾಗಿದೆ. ಲೆಕ್ಕಕ್ಕೆ ನೀಡದ ವಹಿವಾಟು 1400 ಕೋಟಿ ರುಪಾಯಿಗೂ ಹೆಚ್ಚು ಮೊತ್ತವನ್ನು ಪತ್ತೆ ಮಾಡಲಾಗಿದೆ. ಜೈಪುರ ಮೂಲದ ಜ್ಯುವೆಲ್ಲರಿ ಸಂಸ್ಥೆ ಮತ್ತು ಎರಡು ರಿಯಲ್ ಎಸ್ಟೇಟ್ ಡೆವಲಪರ್ಸ್ ಮೇಲೆ ದಾಳಿ ನಡೆಸಿದ ಮೇಲೆ ಈ ಮೊತ್ತವು ಪತ್ತೆಯಾಗಿದೆ.
ಈ ಸಂಸ್ಥೆಗಳಿಗೆ ಸೇರಿದ ಒಟ್ಟಾರೆ 31 ಸ್ಥಳಗಳಲ್ಲಿ ಜನವರಿ 21ನೇ ತಾರೀಕು ಸಮೀಕ್ಷೆ ಮತ್ತು ಶೋಧ ನಡೆಸಲಾಗಿದೆ. ಕಳೆದ ಆರೇಳು ವರ್ಷಗಳಿಂದ ಲೆಕ್ಕಕ್ಕೆ ನೀಡದ ವಹಿವಾಟುಗಳ "ಸಂಪೂರ್ಣ ಮಾಹಿತಿ"ಯು ಮುಖ್ಯ ಕಚೇರಿ ಆವರಣದ ನೆಲಮಹಡಿಯಲ್ಲಿ ಮುಚ್ಚಿಡಲಾಗಿತ್ತು.
ಶೋಧ ನಡೆಸುವ ವೇಳೆಯಲ್ಲಿ ಆರೋಪಕ್ಕೆ ಸಂಬಂಧಿಸಿದ ಸಿಕ್ಕಾಪಟ್ಟೆ ದಾಖಲೆಗಳು ಮತ್ತು ಡಿಜಿಟಲ್ ಡೇಟಾ ಸಿಕ್ಕಿವೆ. ಆ ಪೈಕಿ ಲೆಕ್ಕಕ್ಕೆ ನೀಡದಿದ್ದ ಸ್ವೀಕೃತಿ, ವಿವರಣೆ ನೀಡದ ಅಭಿವೃದ್ಧಿ ವೆಚ್ಚಗಳು, ವಿವರಣೆ ನೀಡ ಆಸ್ತಿಗಳು, ನಗದು ಸಾಲಗಳು, ಮುಂಗಡ, ಹಣ ಸ್ವೀಕಾರ ಕಂಡುಬಂದಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಮೂಹದಲ್ಲಿ ಲೆಕ್ಕಕ್ಕೆ ತೋರಿಸದ 650 ಕೋಟಿ ರುಪಾಯಿಯ ವಹಿವಾಟನ್ನು ಈ ತನಕ ಪತ್ತೆ ಹಚ್ಚಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಮತ್ತೊಂದು ರಿಯಲ್ ಎಸ್ಟೇಟ್ ಸಮೂಹವು ಕಮರ್ಷಿಯಲ್ ಕೇಂದ್ರಗಳು, ಫಾರ್ಮ್ ಹೌಸ್ ಗಳು, ಟೌನ್ ಷಿಪ್ ಮತ್ತು ರೆಸಿಡೆನ್ಷಿಯಲ್ ಎನ್ ಕ್ಲೇವ್ ಗಳ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದೆ.
ಈ ಸಮೂಹವು ವಿಮಾನ ನಿಲ್ದಾಣ ಪ್ಲಾಜಾದಲ್ಲಿ ರಿಯಲ್ ಎಸ್ಟೇಟ್ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಅದಕ್ಕಾಗಿ 1 ಲಕ್ಷ ರುಪಾಯಿ ಮಾತ್ರ ಹೂಡಿಕೆ ಎಂದು ತೋರಿಸಲಾಗಿದೆ. ಆದರೆ ವರ್ಕ್ ಇನ್ ಪ್ರೊಗ್ರೆಸ್ (ಕ್ಲೋಸಿಂಗ್ ಸ್ಟಾಕ್) ಎಂದು ಬ್ಯಾಲೆನ್ಸ್ ಶೀಟ್ ನಲ್ಲಿ ರು. 133 ಕೋಟಿ ರುಪಾಯಿ ಪತ್ತೆಯಾಗಿದೆ ಎಂದು ಹೇಳಿಕೆಯಲ್ಲಿ ಆರೋಪಿಸಲಾಗಿದೆ.
ಕೈಗೆಟುಕುವ ದರದ ವಿವಿಧ ಹೌಸಿಂಗ್ ಸ್ಕೀಮ್ ಗಳನ್ನು ಸಾಕಷ್ಟು ಆದಾಯ ಇದ್ದು, ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಬಯಲು ಮಾಡಿಲ್ಲ. ಅದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳಲ್ಲಿ ಶೋಧ ಕಾರ್ಯಾಚರಣೆ ವೇಳೆ ವಶಪಡಿಸಿಕೊಳ್ಳಲಾಗಿದೆ.
ಈ ಸಮೂಹದಿಂದ ವಿವಿಧ ವ್ಯಕ್ತಿಗಳಿಗೆ 19 ಕೋಟಿ ರುಪಾಯಿ ನಗದು ಸಾಲವನ್ನು ನೀಡಲಾಗಿದೆ. ಇದಕ್ಕಾಗಿ ಲೆಕ್ಕಕ್ಕೆ ತೋರಿಸದ ಬಡ್ಡಿಯನ್ನು ಸಹ ಗಳಿಸಿದ್ದಾರೆ. ಈ ತನಕ 225 ಕೋಟಿ ರುಪಾಯಿ ಮೊತ್ತದ ವಹಿವಾಟನ್ನು ಪತ್ತೆ ಹಚ್ಚಲಾಗಿದೆ ಎಂದು ಸಿಬಿಡಿಟಿ ಹೇಳಿದೆ.
ಇನ್ನು ಜ್ಯುವೆಲ್ಲರಿ ವ್ಯವಹಾರ ನಡೆಸುತ್ತಿದ್ದು, ಲೆಕ್ಕಕ್ಕೆ ನೀಡದ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ತಯಾರಿಕೆ ಕಳೆದ ಆರು ವರ್ಷದ ಮಾಹಿತಿಯನ್ನು ಶೋರೂಮ್ ನಲ್ಲಿ ಮುಚ್ಚಿಡಲಾಗಿತ್ತು. ಅದನ್ನು ಸಹ ವಶಕ್ಕೆ ಪಡೆಯಲಾಗಿದೆ. ರಹಸ್ಯ ಸ್ಥಳದಿಂದ 15 ಕೋಟಿ ರುಪಾಯಿ ಮೌಲ್ಯದ ಬೇನಾಮಿ ಆಸ್ತಿ ಪತ್ತೆ ಮಾಡಲಾಗಿದೆ.
ಲೆಕ್ಕಕ್ಕೆ ತೋರಿಸದ ಮೊತ್ತವನ್ನು ಉದ್ಯೋಗಿಗಳು ಮತ್ತು ಕಾರ್ಮಿಕರ ಬ್ಯಾಂಕ್ ಖಾತೆಗಳ ಮೂಲಕ ವ್ಯವಹರಿಸುತ್ತಿತ್ತು. ಒಟ್ಟಾರೆಯಾಗಿ ಲೆಕ್ಕಕ್ಕೆ ನೀಡದ ಮೊತ್ತ ರು. 525 ಕೋಟಿಯನ್ನು ಈ ತನಕ ಪತ್ತೆ ಹಚ್ಚಲಾಗಿದೆ ಎಂದು ಸಿಬಿಡಿಟಿ ಹೇಳಿದೆ.
More From GoodReturns

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ



Click it and Unblock the Notifications