For Quick Alerts
ALLOW NOTIFICATIONS  
For Daily Alerts

RBI ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿ ಮುಖ್ಯಾಂಶಗಳು

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗೌರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ, ವಿವಿಧ ಘೋಷಣೆ, ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೊರೊನಾದ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಜನರು ಮತ್ತು ದೇಶದ ಆರ್ಥಿಕತೆ ಕುರಿತಾಗಿ ಅವರ ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾವವಾದ ಪ್ರಮುಖಾಂಶಗಳ ವಿವರ ಹೀಗಿವೆ.

* ರೆಪೋ ದರ (ವಾಣಿಜ್ಯ ಬ್ಯಾಂಕ್ ಗಳು ರಿಸರ್ವ್ ಬ್ಯಾಂಕ್ ನಿಂದ ಪಡೆದ ಸಾಲಕ್ಕೆ ನೀಡುವ ಬಡ್ಡಿ ದರ ನಿರ್ಧಾರ ಆಗುವುದು ರೆಪೋ ದರದ ಮೇಲೆ) 40 ಬೇಸಿಸ್ ಪಾಯಿಂಟ್ ಕಡಿತ ಮಾಡಿದ್ದು, 4.4 ಪರ್ಸೆಂಟ್ ನಿಂದ 4 ಪರ್ಸೆಂಟ್ ಗೆ ಇಳಿಕೆ.

EMI ಪಾವತಿಯಿಂದ ಮತ್ತೆ 3 ತಿಂಗಳು ವಿನಾಯಿತಿ ನೀಡಿದ RBIEMI ಪಾವತಿಯಿಂದ ಮತ್ತೆ 3 ತಿಂಗಳು ವಿನಾಯಿತಿ ನೀಡಿದ RBI

* ರಿವರ್ಸ್ ರೆಪೋ ದರ (ವಾಣಿಜ್ಯ ಬ್ಯಾಂಕ್ ಗಳಿಂದ ರಿಸರ್ವ್ ಬ್ಯಾಂಕ್ ಪಡೆದ ಮೊತ್ತಕ್ಕೆ ನೀಡುವ ಬಡ್ಡಿ) 3.35 ಪರ್ಸೆಂಟ್ ಗೆ ಇಳಿಕೆ.

RBI ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿ ಮುಖ್ಯಾಂಶಗಳು

* ವಿವಿಧ ಅವಧಿಯ ಸಾಲಗಳ ಮೇಲಿನ ಇಎಂಐ ಪಾವತಿಗೆ ಮತ್ತೆ ಮೂರು ತಿಂಗಳು, ಆಗಸ್ಟ್ 31ರ ತನಕ ವಿನಾಯಿತಿ.

* ಭಾರತದ ಜಿಡಿಪಿಗೆ ದೊಡ್ಡ ಮಟ್ಟದ ಹೊಡೆತ ಬೀಳಬಹುದು. ಆರ್ಥಿಕ ವರ್ಷ 2021ಕ್ಕೆ ನೆಗೆಟಿವ್ ಬೆಳವಣಿಗೆ ನಿರೀಕ್ಷೆ.

* ಶಿಪ್ ಮೆಂಟ್ ನಂತರದ ಮತ್ತು ಪೂರ್ವದ ಗರಿಷ್ಠ ಸಾಲದ ಅವಧಿ ಹನ್ನೆರಡು ತಿಂಗಳಿಂದ ಹದಿನೈದು ತಿಂಗಳಿಗೆ ಏರಿಕೆ.

* EXIM ಬ್ಯಾಂಕ್ ಗೆ ಆರ್ ಬಿಐನಿಂದ 15 ಸಾವಿರ ಕೋಟಿ ರುಪಾಯಿ.

* ಬ್ಯಾಂಕ್ ಗಳು ಗುಂಪು ಎಕ್ಸ್ ಪೋಷರ್ ಮಿತಿ ಈವರೆಗೆ ಇದ್ದ 25 ಪರ್ಸೆಂಟ್ ನಿಂದ 30 ಪರ್ಸೆಂಟ್ ಗೆ ಏರಿಕೆ.

* ಕಾರ್ಯ ನಿರ್ವಹಣೆ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್) ಆಗಿ ಪಡೆದ ಮೊತ್ತವನ್ನು ಟರ್ಮ್ ಲೋನ್ ಆಗಿ ಬದಲಾಯಿಸಿ, ಮರುಪಾವತಿಗೆ 2021ರ ಮಾರ್ಚ್ ತನಕ ಅವಕಾಶ.

* ಬೇಳೆಕಾಳುಗಳ ಬೆಲೆಯಲ್ಲಿನ ಏರಿಕೆ ಆತಂಕಕ್ಕೆ ಕಾರಣವಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಕೂಡಲೇ ಮಾರಾಟ ಶುರು ಮಾಡುವುದರಿಂದ ದ್ವಿದಳ ಧಾನ್ಯಗಳ ಬೆಲೆಯಲ್ಲಿ ಇಳಿಕೆ.

* ಆಮದು- ರಫ್ತು ವ್ಯವಹಾರಕ್ಕೂ ಪೂರಕವಾದ ಘೋಷಣೆಗಳು.

English summary

RBI Governor Shakthikanth Das Press Meet Highlights

RBI governor ShakthiKanta Das press meet highlights including EMI moratorium extension, repo rate cut and other measures.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X