ಭಾರತದಲ್ಲೇ ಅತ್ಯಂತ ಶ್ರೀಮಂತ ಹಿಂದೂ ದೇವಾಲಯ, ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಾಲಯದ ಆದಾಯದ ಬಗ್ಗೆ ಒಂದಿಷ್ಟು ಆಸಕ್ತಿಕರವಾದ ಡೀಟೇಲ್ಸ್ ಇಲ್ಲಿದೆ. ಕಳೆದ ವರ್ಷ, 2019ರಲ್ಲಿ ಭಕ್ತ ಮಹಾಜನರು ಶ್ರೀವಾರಿ ಹುಂಡಿಗೆ ಪ್ರತಿ ಸೆಕೆಂಡ್ ಗೆ ರು. 368.38 ಅನ್ನು ದೇಣಿಗೆ ಕೊಟ್ಟಿದ್ದಾರೆ. ಪ್ರತಿ ವರ್ಷ ಹತ್ತಾರು ಲಕ್ಷ ಮಂದಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ನಗದು, ಬೆಲೆ ಬಾಳುವ ವಸ್ತುಗಳನ್ನು ದೇವರಿಗೆ ಅರ್ಪಣೆ ಮಾಡುತ್ತಾರೆ. ಅದರಲ್ಲಿ ಬೆಳ್ಳಿ, ಬಂಗಾರ ಎಲ್ಲವೂ ಒಳಗೊಂಡಿರುತ್ತದೆ. ಶತಮಾನಗಳಿಂದಲೂ ವೆಂಕಟೇಶ್ವರ ಸ್ವಾಮಿಗೆ ಹರಕೆ ಹೊರುವುದು ಹಾಗೂ ಅದನ್ನು ಪೂರೈಸುವುದು ನಡೆದುಕೊಂಡು ಬಂದಿದೆ. 2019ನೇ ಇಸವಿಯ ಜನವರಿಯಿಂದ ಡಿಸೆಂಬರ್ ವರೆಗೆ ಭಕ್ತಾದಿಗಳು 1,161.74 ಕೋಟಿ ರುಪಾಯಿಯನ್ನು ಭಕ್ತರು ನೀಡಿದ್ದಾರೆ.
2018ನೇ ಇಸವಿಯಲ್ಲಿ ತಿರುಪತಿ ತಿರುಮಲ ದೇವಾಲಯಕ್ಕೆ 1,066.98 ಕೋಟಿ ರುಪಾಯಿ ಆದಾಯ ಬಂದಿದೆ. 2018ಕ್ಕೆ ಹೋಲಿಕೆ ಮಾಡಿದರೆ 2019ರಲ್ಲಿ ಹುಂಡಿ ಸಂಗ್ರಹದ ಮೊತ್ತ 6 ಪರ್ಸೆಂಟ್ ಅಂದರೆ, 95.25 ಕೋಟಿ ರುಪಾಯಿ ಹೆಚ್ಚಳವಾಗಿದೆ. 2019ನೇ ಇಸವಿಯಲ್ಲಿ ಹುಂಡಿಗೆ ಬಿದ್ದ ಸರಾಸರಿ ಮೊತ್ತ ಪ್ರತಿ ನಿಮಿಷಕ್ಕೆ 22,103 ರುಪಾಯಿ. 2018ರಲ್ಲಿ ಪ್ರತಿ ನಿಮಿಷಕ್ಕೆ 20,290.71 ರುಪಾಯಿ ಸಂಗ್ರಹ ಆಗಿತ್ತು.

ಹುಂಡಿ ಮೂಲಕ ಸಂಗ್ರಹ ಆಗುವ ಹಣವನ್ನು ಹೊರತುಪಡಿಸಿ, ಎಫ್ ಡಿ ಮೇಲೆ ಬರುವ ಬಡ್ಡಿ ಹಣ, ಪ್ರಸಾದದ ಮಾರಾಟದಿಂದ ಬರುವ ಮೊತ್ತ, ದರ್ಶನ ಟಿಕೆಟ್ ಮಾರಾಟ, ವಾಸ್ತವ್ಯಕ್ಕೆ ಪಾವತಿಸುವ ಹಣ, ಭೋಗ್ಯ ಹಾಗೂ ಬಾಡಿಗೆ ಮೂಲಕವೂ ಆದಾಯ ಬರುತ್ತದೆ. ಎಫ್ ಡಿ ಮೇಲಿನ ಬಡ್ಡಿ 857.28 ಕೋಟಿ ರುಪಾಯಿ, ಪ್ರಸಾದದ ಮಾರಾಟದಿಂದ 330 ಕೋಟಿ, ದರ್ಶನ ಟಿಕೆಟ್ ನಿಂದ 233 ಕೋಟಿ ರುಪಾಯಿ ಹಣ 2019-20ನೇ ಆರ್ಥಿ ವರ್ಷದಲ್ಲಿ ಹಣ ಸಂಗ್ರಹ ಆಗುವ ಅಂದಾಜು ಮಾಡಲಾಗಿದೆ.
ಇನ್ನು ಅನ್ನ ಪ್ರಸಾದದ ವಿಚಾರಕ್ಕೆ ಬಂದರೆ ದೇವಸ್ಥಾನದಿಂದ ಪ್ರತಿ ನಿಮಿಷಕ್ಕೆ ಸರಾಸರಿ 122.85 ಮಂದಿಗೆ ಆಹಾರ ಒದಗಿಸಲಾಗಿದೆ. 2019ರಲ್ಲಿ 6.45 ಕೋಟಿ ಮಂದಿ ಭಕ್ತರಿಗೆ ಅನ್ನ ಪ್ರಸಾದವನ್ನು ಪೂರೈಸಲಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications