ಟಾಟಾ ಗ್ರೂಪ್ ಮಾಲೀಕತ್ವದ ಏರ್ಇಂಡಿಯಾ ಸಂಸ್ಥೆಯು ಜನವರಿ 19ರಿಂದ ಜನವರಿ 26ರವರೆಗೆ ಕೆಲವು ಸ್ಥಳೀಯ ವಿಮಾನಗಳನ್ನು ರದ್ದು ಮಾಡಿದ್ದರೆ, ಕೆಲವು ಅಂತಾರಾಷ್ಟ್ರೀಯ ವಿಮಾನಗಳ ಅವಧಿಯನ್ನು ಮರುನಿಗದಿ ಮಾಡಿದೆ. ಪ್ರಮುಖವಾಗಿ ಗಣರಾಜ್ಯೋತ್ಸವದ ಹಿನ್ನೆಲೆಯಿಂದಾಗಿ ಏರ್ಇಂಡಿಯಾ ಈ ವಿಮಾನಗಳನ್ನು ರದ್ದು ಮತ್ತು ಮರುನಿಗದಿ ಮಾಡಿದೆ. ದೆಹಲಿ ಏರ್ಪೋರ್ಟ್ ಏರ್ಮೆನ್ನಲ್ಲಿ ಈ ವಿಮಾನಗಳನ್ನು ರದ್ದು ಮಾಡಲಾಗಿದೆ.
ಏರ್ಇಂಡಿಯಾ ಕೆಲವು ಸ್ಥಳೀಯ ವಿಮಾನಗಳ ಅವಧಿಯನ್ನು ಮರುನಿಗದಿ ಮಾಡಿದೆ. ಆದರೆ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದು ಮಾಡಲಾಗಿಲ್ಲ. ಆ ವಿಮಾನಗಳನ್ನು ಮರುನಿಗದಿ ಮಾಡಲಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಕ್ಕೆ ತೊಂದರೆ ಉಂಟಾಗದಂತೆ ವಿಮಾನ ಸಂಸ್ಥೆಯು ಕ್ರಮವನ್ನು ಕೈಗೊಂಡಿದೆ. ಸ್ಥಳೀಯ ವಿಮಾನಗಳನ್ನು ಮಾತ್ರ ರದ್ದು ಮಾಡಲಾಗಿದೆ.
ಪ್ರಮುಖವಾಗಿ ಗಣರಾಜ್ಯೋತ್ಸವದ ಹಿನ್ನೆಲೆ ಈ ವಿಮಾನಗಳನ್ನು ರದ್ದು ಮಾಡಲಾಗಿದೆ ಅಥವಾ ಮರುನಿಗದಿ ಮಾಡಲಾಗಿದೆ. ಗಣರಾಜ್ಯೋತ್ಸ ದಿನದಂದು (ಜನವರಿ 26) ಮತ್ತು ಗಣರಾಜ್ಯೋತ್ಸವ ನಡೆಯಲಿರುವ ದಿನದ ಒಂದು ವಾರ ಅವಧಿಯಲ್ಲಿ ಈ ವಿಮಾನಗಳನ್ನು ರದ್ದು ಮಾಡಲಾಗಿದೆ. ಪ್ರತಿ ದಿನ ಕಡಿಮೆ ಮೂರು ಗಂಟೆಗಳ ಕಾಲ ವಿಮಾನವನ್ನು ರದ್ದು ಮಾಡಲಾಗಿದೆ.

ವಿಮಾನಗಳ ಪ್ರಯಾಣ ಅತೀ ತಡವಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಏರ್ಇಂಡಿಯಾವು ವಿಮಾನಗಳನ್ನು ರದ್ದು ಅಥವಾ ಮರುನಿಗದಿ ಮಾಡಿದೆ. ಈ ಬಗ್ಗೆ ಏರ್ಇಂಡಿಯಾ ಅಧಿಕೃತ ಹೇಳಿಕೆಯನ್ನು ಕೂಡಾ ನೀಡಿದೆ.
ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿರುವುದು ಏನು?
"ಗಣರಾಜ್ಯೋತ್ಸವದ ಹಿನ್ನೆಲೆ ಇಂಡಿಯನ್ ಏರ್ಫೋರ್ಸ್ ಕೆಲವೊಂದು ತಯಾರಿಗಳನ್ನು ನಡೆಸಲಿದೆ. 74ನೇ ಗಣರಾಜ್ಯೋತ್ಸವಕ್ಕೂ ಮುನ್ನ ಒಂದು ವಾರಗಳ ಮುನ್ನ ವಾಯುಮಾರ್ಗದಲ್ಲಿ ಕೆಲವೊಂದು ನಿರ್ಬಂಧಗಳು ಇರುತ್ತದೆ. ಆದ್ದರಿಂದಾಗಿ ಏರ್ಇಂಡಿಯಾ ವಿಮಾನವನ್ನು ರದ್ದು ಮಾಡುವ ಮತ್ತು ವಿಮಾಗಳನ್ನು ಮರುನಿಗದಿ ಮಾಡುವ ನಿರ್ಧಾರವನ್ನು ಮಾಡಿದೆ," ಎಂದು ತಿಳಿಸಿದೆ.
10:30 ಗಂಟೆಯಿಂದ 12:45 ಗಂಟೆವರೆಗೆ ಜನವರಿ 19-24ರವರೆಗೆ ಮತ್ತು ಜನವರಿ 26ರಂದು ವಿಮಾನ ಪ್ರಯಾಣ ಸಮಯ ವ್ಯತ್ಯಯವಾಗಲಿದೆ. 10:30 ಗಂಟೆಯಿಂದ 12:45 ಗಂಟೆವರೆಗಿನ ದೆಹಲಿಯಿಂದ ಬರುವ, ದೆಹಲಿಗೆ ತೆರಳುವ ಎಲ್ಲ ವಿಮಾನವನ್ನು ರದ್ದು ಮಾಡಲಾಗಿದೆ. ಈ ಸಮಯಕ್ಕೂ ಮುನ್ನ ಅಥವಾ ನಂತರ ಪ್ರಯಾಣ ಮಾಡುವ ವಿಮಾನಗಳ ಹಾರಾಟದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.
ಇನ್ನು ಅಂತಾರಾಷ್ಟ್ರೀಯ ವಿಮಾನಗಳ ಅವಧಿ ವ್ಯತ್ಯಯವಾಗಲಿದೆ. ಎಲ್ಎಚ್ಆರ್ (ಲಂಡನ್), ಐಎಡಿ (ಡುಲ್ಲೆಸ್), ಇಡಬ್ಲ್ಯೂಆರ್ (ನೆವಾರ್ಕ್), ಕೆಟಿಎಂ (ಕಟ್ಮಂಡು), ಬಿಕೆಕೆ (ಬಾಂಕಾಂಗ್) ಅವಧಿಯು ವ್ಯತ್ಯಯವಾಗಲಿದೆ. ಈ ಬಗ್ಗೆ www.airindia.in ವೆಬ್ಸೈಟ್ನಲ್ಲಿ ಎಲ್ಲ ಮಾಹಿತಿ ಲಭ್ಯವಾಗಲಿದೆ.
More From GoodReturns

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ



Click it and Unblock the Notifications