ಬೆಂಗಳೂರು ನಗರ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಧ್ಯೆ ಸಂಪರ್ಕ ಕಲ್ಪಿಸುವ ರೈಲು ಸಂಚಾರದ ಕಾರ್ಯ ನಿರ್ವಹಣೆ ಜನವರಿ 4ರ ಸೋಮವಾರದಿಂದ ಆರಂಭವಾಗಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವುದರಿಂದ ಸಂಚಾರ ದಟ್ಟಣೆ ಭಾರೀ ಪ್ರಮಾಣದಲ್ಲಿ ಇಳಿಕೆ ಆಗಲಿದೆ ಎಂದು ಹೊಸದಾಗಿ ಆರಂಭವಾಗಿರುವ ರೈಲು ನಿಲ್ದಾಣದ ಫೋಟೋಗಳನ್ನು ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಟ್ವೀಟ್ ಮಾಡಿದ್ದಾರೆ.
ಈ ಮಾರ್ಗವನ್ನು ನೈರುತ್ಯ ರೈಲ್ವೆಯಿಂದ ನಿರ್ವಹಣೆ ಮಾಡಲಾಗುತ್ತದೆ. ಈ ಮೂಲಕ ರಸ್ತೆಗೆ ಪರ್ಯಾಯವಾಗಿ ಹಲವು ಪ್ರಯಾಣಿಕರಿಗೆ ವಿಮಾನ ನಿಲ್ದಾಣ ತಲುಪುವುದಕ್ಕೆ ಸಹಾಯ ಆಗುತ್ತದೆ. ಸದ್ಯಕ್ಕೆ ಐದು ರೈಲುಗಳು ನಗರ ಮತ್ತು ವಿಮಾನ ನಿಲ್ದಾಣದ ಮಧ್ಯೆ ಸಂಚರಿಸುತ್ತವೆ. ದರವು 10- 15 ರುಪಾಯಿ ಇರುತ್ತದೆ.
ರಸ್ತೆ ಮಾರ್ಗದಲ್ಲಿ ಕೆಎಸ್ ಆರ್ ಟಿಸಿಯಿಂದ ಸಂಚರಿಸುವ ಬಸ್ ಪ್ರಯಾಣ ದರವು ನಗರದ ವಿವಿಧ ಪ್ರಮುಖ ಭಾಗಗಳಿಂದ ಕನಿಷ್ಠ 250 ರುಪಾಯಿ ಇದೆ. ಇನ್ನು ಕ್ಯಾಬ್ ಗಳಿಗೆ ಕನಿಷ್ಠ 700 ರುಪಾಯಿ ಇದೆ.

ಇನ್ನು ವೇಳಾಪಟ್ಟಿ ವಿಚಾರಕ್ಕೆ ಬಂದರೆ, ನಗರ ರೈಲು ನಿಲ್ದಾಣದಿಂದ ಬೆಳಗ್ಗೆ 4.45, ರಾತ್ರಿ 9 ಗಂಟೆಗೆ ರೈಲುಗಳು ತೆರಳುತ್ತದೆ. ಯಲಹಂಕ, ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಿಂದ ಕ್ರಮವಾಗಿ ಬೆಳಗ್ಗೆ 7, 8.30 ಮತ್ತು ಸಂಜೆ 5.55ಕ್ಕೆ ಹೊರಡುತ್ತದೆ.
ವಿಮಾನ ನಿಲ್ದಾಣದಿಂದ ರೈಲು ಸಂಜೆ 6.43, ರಾತ್ರಿ 10.37ಕ್ಕೆ ಮೆಜೆಸ್ಟಿಕ್ ಗೆ ಹೊರಡುತ್ತದೆ. ಬೆಳಗ್ಗೆ 6.22, 7.45 ಮತ್ತು 8.21ಕ್ಕೆ ಯಲಹಂಕ, ಬೆಂಗಳೂರು ಕಂಟೋನ್ಮೆಂಟ್ ಮತ್ತು ಯಶವಂತಪುರ ನಿಲ್ದಾಣಕ್ಕೆ ಕ್ರಮವಾಗಿ ತೆರಳುತ್ತವೆ. ಇನ್ನು ವಿಮಾನ ನಿಲ್ದಾಣ ಪ್ರಾಧಿಕಾರದ ಜತೆಗೆ ಚರ್ಚೆಯ ನಂತರ ಈ ಸಮಯ ನಿಗದಿ ಮಾಡಲಾಗಿದೆ. ಇದರಿಂದ ವಿಮಾನ ನಿಲ್ದಾಣದ ನೂರಾರು ಸಿಬ್ಬಂದಿಗೆ ಅನುಕೂಲ ಆಗುತ್ತದೆ.
ಇನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ನಿರ್ವಹಿಸುವ ಷಟಲ್ ಬಸ್ ಗಳು ಪ್ರಯಾಣಿಕರನ್ನು ಟರ್ಮಿನಲ್ ಗೆ ಕರೆದೊಯ್ಯಲು ಕಾರ್ಯ ನಿರ್ವಹಿಸುತ್ತವೆ.
More From GoodReturns

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications