ಆ ಹಿರಿಯರ ಹೆಸರು ಯದಿ ರೆಡ್ಡಿ. ವಯಸ್ಸು 73. ವಿಜಯವಾಡದಲ್ಲಿ ದೇವಾಲಯದ ಪ್ರವೇಶ ದ್ವಾರದಲ್ಲಿ ಕೂತು ಭಿಕ್ಷೆ ಬೇಡುವ ಈ ವ್ಯಕ್ತಿ ಈಗ ಸುದ್ದಿಯಲ್ಲಿದ್ದಾರೆ. ಏಕೆ ಗೊತ್ತಾ? ವಿಜಯವಾಡದ ಸಾಯಿಬಾಬ ದೇವಸ್ಥಾನಕ್ಕೆ ಕಳೆದ 7 ವರ್ಷದಲ್ಲಿ ಇವರು 8 ಲಕ್ಷ ರುಪಾಯಿ ದೇಣಿಗೆ ನೀಡಿದ್ದಾರೆ.
ಅಂದಹಾಗೆ, ಯದಿ ರೆಡ್ಡಿ ಅವರು ನಾಲ್ಕು ದಶಕಗಳ ಕಾಲ ರಿಕ್ಷಾ ದೂಡಿದ್ದಾರೆ. ಆದರೆ ಯಾವಾಗ ಮಂಡಿಯೇ ಸವೆದು ಹೋಯಿತೋ ಅನಿವಾರ್ಯವಾಗಿ ಭಿಕ್ಷಾಟನೆಗೆ ಇಳಿದಿದ್ದಾರೆ. "ನಾನು ನಲವತ್ತು ವರ್ಷಗಳ ಕಾಲ ರಿಕ್ಷಾ ದೂಡಿದ್ದೇನೆ. ಮೊದಲಿಗೆ ಸಾಯಿಬಾಬ ದೇವಸ್ಥಾನದ ಅಧಿಕಾರಿಗಳಿಗೆ 1 ಲಕ್ಷ ರುಪಾಯಿ ನೀಡಿದೆ. ಯಾವಾಗ ನನ್ನ ಆರೋಗ್ಯ ಕ್ಷೀಣಿಸುತ್ತಾ ಬಂತೋ ಆಗ ನನಗೆ ಹಣದ ಅಗತ್ಯ ಇಲ್ಲ ಅನಿಸಿತು. ಆಗ ಇನ್ನೂ ಹೆಚ್ಚಿಗೆ ಹಣವನ್ನು ದೇವಾಲಯಕ್ಕೆ ನೀಡಲು ನಿರ್ಧರಿಸಿದೆ" ಎನ್ನುತ್ತಾರೆ.
ವಿಚಿತ್ರ ಏನು ಅಂದರೆ, ಯಾವಾಗ ರೆಡ್ಡಿ ಅವರು ದೇವಸ್ಥಾನಕ್ಕೆ ಹಣ ದೇಣಿಗೆ ನೀಡಲು ಆರಂಭಿಸಿದರೋ ಆಗ ಅವರ ಆದಾಯವೂ ಹೆಚ್ಚಾಗಿದೆ. "ದೇವಸ್ಥಾನಕ್ಕೆ ದೇಣಿಗೆ ನೀಡಲು ಆರಂಭಿಸಿದ ಮೇಲೆ ಜನರು ನನ್ನನ್ನು ಗುರುತಿಸಲು ಶುರು ಮಾಡಿದರು. ಅಚ್ಚರಿ ಅನ್ನುವ ರೀತಿಯಲ್ಲಿ ನನ್ನ ಆದಾಯ ಕೂಡ ಹೆಚ್ಚಾಯಿತು. ಈ ತನಕ 8 ಲಕ್ಷ ರುಪಾಯಿ ನೀಡಿದ್ದೇನೆ. ನನ್ನ ಎಲ್ಲ ಸಂಪಾದನೆಯನ್ನು ಆ ದೇವರಿಗೇ ನೀಡುತ್ತೇನೆ ಎಂದು ಭಾಷೆ ತೆಗೆದುಕೊಂಡಿದ್ದೇನೆ" ಎಂದು ಹೇಳಿದ್ದಾರೆ ಯದಿ ರೆಡ್ಡಿ.

ದೇವಸ್ಥಾನದ ಆಡಳಿತ ಮಂಡಳಿಯವರು ರೆಡ್ಡಿಯವರ ದಾನ ಗುಣವನ್ನು ಮೆಚ್ಚಿಕೊಂಡಿದ್ದು, ಯದಿ ರೆಡ್ಡಿ ನೀಡಿದ ಹಣದಿಂದ ದೇವಾಲಯದ ಅಭಿವೃದ್ಧಿಗೆ ಸಹಾಯ ಆಗಿದೆ ಎಂದು ತಿಳಿಸಿದ್ದಾರೆ.
"ಯದಿ ರೆಡ್ಡಿ ಸಹಾಯದಿಂದ ನಾವು ಗೋಶಾಲೆ ನಿರ್ಮಿಸಲು ಸಾಧ್ಯವಾಗಿದೆ. ಅವರು 8 ಲಕ್ಷ ರುಪಾಯಿಯನ್ನು ದೇವಸ್ಥಾನಕ್ಕೆ ನೀಡಿದ್ದಾರೆ. ನಾವು ಯಾರನ್ನೂ ಏನೂ ಕೇಳಿಲ್ಲ. ಆದರೆ ನಗರದಲ್ಲಿ ಇರುವ ಜನರು ಅವರಿಂದ ಆದಷ್ಟು ಸಹಾಯವನ್ನು ಮಾಡುತ್ತಲೇ ಇದ್ದಾರೆ" ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications