ಬೆಂಗಳೂರಿಗೆ ಹತ್ತಿರದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳಿಂದ ಜನರು ಬರುತ್ತಿದ್ದರು. ಬೆಂಗಳೂರಲ್ಲೇ ಹಗಲು- ರಾತ್ರಿ ಅಂತ ನೋಡದೆ ದುಡಿಯುತ್ತಿದ್ದರು. ಇದು ಕೆಲವರ ಪಾಲಿಗೆ ಫುಲ್ ಟೈಮ್ ದುಡಿಮೆ ಆಗಿದ್ದರೆ, ಹಲವರಿಗೆ ಪಾರ್ಟ್ ಟೈಮ್ ಆಗಿರುತ್ತಿತ್ತು.
ತಮ್ಮ ಮೂಲ ಕಸುಬು ಅಷ್ಟೇನೂ ಬಿಜಿ ಆಗಿರದ ಕಾಲದಲ್ಲಿ ಬೆಂಗಳೂರಿಗೆ ಬಂದುಬಿಡುತ್ತಿದ್ದರು. ಏಕೆಂದರೆ ದುಡಿಮೆಗೆ ಸಿಕ್ಕಾಪಟ್ಟೆ ಅವಕಾಶ ಇರುತ್ತಿತ್ತು. ಆದರೆ ಬೆಂಗಳೂರು ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿದೆಯಾ ಎಂಬ ಅನುಮಾನ ಮೂಡುತ್ತಿದೆ. ಮುಂಚಿನಂತೆ ಉದ್ಯೋಗ- ಕಸುಬಿಗಾಗಿ ಬೆಂಗಳೂರು ಹುಡುಕಿಕೊಂಡು ಕರ್ನಾಟಕದ ನಾನಾ ಭಾಗಗಳಿಂದ ಹಾಗೂ ಭಾರತದ ನಾನಾ ರಾಜ್ಯಗಳಿಂದ ಜನರು ಇನ್ನು ಮುಂದೆಯೂ ಬರಬಹುದಾ ಎಂಬ ಬಗ್ಗೆಯೂ ಪ್ರಶ್ನೆಗಳಿವೆ.
ಕೊರೊನಾದ ಹೊಡೆತಕ್ಕೆ ಎಲ್ಲ ವರ್ಗದವರೂ ತತ್ತರಿಸಿ ಹೋಗಿದ್ದಾರೆ. ಬೆಂಗಳೂರಿನಲ್ಲಿ ಇನ್ನು ಕೆಲಸಕ್ಕೆ ಹೋಗಿ, ಸಂಬಳ ದುಡಿದು, ಬಾಡಿಗೆ ಕಟ್ಟಿಕೊಂಡು, ತಮ್ಮ ಊರಿಗೆ ಹಣ ಕಳುಹಿಸಿ... ಅದರ ಮೇಲೆ ಉಳಿತಾಯ ಮಾಡುವುದು ಅಸಾಧ್ಯದ ಮಾತು ಎಂದೆನಿಸಿ ಆಗಿದೆ. ಉತ್ತರ ಭಾರತದ ರಾಜ್ಯಗಳಿಂದ ಹಾಗೂ ಪಕ್ಕದ ತಮಿಳುನಾಡು, ಆಂಧ್ರದಿಂದ ಬಂದಿದ್ದವರು ಸಹ ಕಂತು ಕಂತಿನಲ್ಲಿ ಟೆಂಟನ್ನೇ ಕಿತ್ತುಕೊಂಡು, ಬೆಂಗಳೂರಿನಿಂದ ಹೊರಬಿದ್ದಿದ್ದಾರೆ.
ಮನೆಗಳು ಖಾಲಿ ಖಾಲಿ
ಹೋಟೆಲ್ ಗಳನ್ನು ಖಾಲಿ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಶಾಪಿಂಗ್ ಮಾಲ್ ಗಳಲ್ಲಿ ಮಳೆಗೆಗಳು ಖಾಲಿ. ಕೆಲವು ಬಡಾವಣೆಗಳಲ್ಲಿ ಬಾಡಿಗೆಗೆ ಮನೆಗಳು ಸಿಕ್ಕಾಪಟ್ಟೆ ಇವೆ. ಕೇಳುವವರೇ ಇಲ್ಲದಂತಾಗಿದೆ. ಅದರಲ್ಲೂ ಕೈಗಾರಿಕೆ ಪ್ರದೇಶಗಳಿಗೆ ಹತ್ತಿರ ಇದ್ದ ಕಡೆಗಳಲ್ಲಿ ಮನೆಗಳು ಖಾಲಿ ಇವೆ. ಆದರೆ ಅವುಗಳನ್ನು ಕೇಳುವವರಿಲ್ಲ. ಬಾಡಿಗೆಯನ್ನು ಆದಾಯವಾಗಿ ನೆಚ್ಚಿಕೊಂಡಿದ್ದವರು ಸಹ ಕಂಗಾಲಾಗಿದ್ದಾರೆ. ಊರುಗಳಿಗೆ ವಾಪಸಾದ ಬಾಡಿಗೆದಾರರು ಹಿಂತಿರುಗಿಲ್ಲ. ಇನ್ನೂ ಕೆಲವರು ಮನೆಗಳನ್ನೇ ಖಾಲಿ ಮಾಡಿದ್ದಾರೆ. ಪೇಯಿಂಗ್ ಗೆಸ್ಟ್ ಗಳಾಗಿ ಇದ್ದವರದು ಸಹ ಇದೇ ಕಥೆ. ಆದರೆ ಇದಕ್ಕೆ ವಿರುದ್ಧ ಎಂಬಂತೆ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳು ಸೇರಿದಂತೆ ಇತರ ಕೆಲಸ- ಕಾರ್ಯಗಳು ಜೀವ ಪಡೆದಿವೆ.
ಬೇಸಾಯಕ್ಕೆ ಬೇಕಾದಷ್ಟು ಜನರು ಸಿಗುತ್ತಿದ್ದಾರೆ
"ಇದೇ ಮೊದಲ ಬಾರಿಗೆ ನಮ್ಮ ಜಮೀನಿನಲ್ಲಿ ಬೇಸಾಯಕ್ಕೆ ಏನೂ ಸಮಸ್ಯೆ ಆಗಲಿಲ್ಲ. ಎಲ್ಲರೂ ಹುಡುಗರು. ಬೆಂಗಳೂರಿನಿಂದ ಬಂದಿದ್ದವರು ಹೆಚ್ಚು. ಉಡುಪಿ, ಮುಂಬೈ, ಚೆನ್ನೈ ಹೀಗೆ ನಾನಾ ಕಡೆಗಳಿಂದ ವಾಪಸ್ ಮನೆಗೆ ಬಂದಿದ್ದಾರೆ. ಇವರಿಗೆಲ್ಲ ಬೇಸಾಯ ಗೊತ್ತು. ಆದರೆ ಸಂಪಾದನೆ ಅಂದುಕೊಂಡು ಬೇರೆ ಬೇರೆ ಪಟ್ಟಣ- ನಗರಗಳಿಗೆ ಹೋಗಿದ್ದರು. ನಮಗೆ ಬೇಸಾಯಕ್ಕೆ ಜನರೇ ಸಿಗುವುದೇ ಕಷ್ಟವಾಗಿ ಹೋಗಿತ್ತು. ಈ ಸಲ ಆ ಸಮಸ್ಯೆ ಆಗಲಿಲ್ಲ. ಜತೆಗೆ ಕೂಲಿ ಹಣಕ್ಕೂ ಬಹಳ ಬೇಡಿಕೆ ಅಂತೇನೂ ಇಲ್ಲ. ಮನೆಯಲ್ಲಿ ಇರುವ ಬದಲು ಕೆಲಸ ಕೊಡಿ ಎಂದು ಕೇಳಿಕೊಂಡು ಬರವವರೇ ಹೆಚ್ಚು. ಕೊರೊನಾದಿಂದ ಆದ ಅನುಕೂಲ ಇದು. ನಮ್ಮ ಊರಿನ ಹುಡುಗ- ಹುಡುಗಿಯರನ್ನು ಮತ್ತೆ ದಿನವೂ ನೋಡುವ ಹಾಗಾಯಿತು. ಜತೆಗೆ ಕೃಷಿ ವೃತ್ತಿ ಉಳಿಯಬಹುದು ಎಂಬ ನಂಬಿಕೆ ಕೂಡ ಬರುತ್ತಿದೆ" ಎಂದರು ತೀರ್ಥಹಳ್ಳಿ ತಾಲೂಕಿನ ನೆಂಪೆಯಲ್ಲಿ ಅಡಿಕೆ ಕೃಷಿ ಮಾಡುವ ಕೃಷಿಕ ಕೃಷ್ಣಸ್ವಾಮಿ.
ಬೆಂಗಳೂರು ಸುತ್ತಮುತ್ತಲಿಂದ ಬರುತ್ತಿದ್ದರು
ಬೆಂಗಳೂರಿಗೆ ಹತ್ತಿರದ ಜಿಲ್ಲೆಗಳಿಂದ ಶನಿವಾರ- ಭಾನುವಾರಗಳಂದು ಬಂದು, ಕ್ಯಾಬ್ - ಆಟೋಗಳನ್ನು ಓಡಿಸುತ್ತಿದ್ದವರು, ಗಾರ್ಮೆಂಟ್ ಗಳಿಗೆ ಕೆಲಸಕ್ಕೆ ಬರುತ್ತಿದ್ದವರು ಇದ್ದರು. ಇದೀಗ ಈ ಎಲ್ಲಕ್ಕೂ ಪೆಟ್ಟು ಬಿದ್ದಿದೆ. ಇನ್ನು ಬೇಡಿಕೆ ಕಡಿಮೆ ಆಗಿರುವುದರಿಂದ ಕೆಲವು ಫ್ಯಾಕ್ಟರಿಗಳಲ್ಲಿ ಕೆಲಸದಿಂದ ತೆಗೆದು ಹಾಕಲಾಗಿದೆ. ಇನ್ನು ಏಕಾಏಕಿ ಕಾರ್ಮಿಕರ ಲಭ್ಯತೆ ಪ್ರಮಾಣ ಹೆಚ್ಚಾಗಿದ್ದು, ಅವರಿಗೆ ಕೆಲಸ ಕೊಡಬೇಕಾದ ಉದ್ಯಮ, ವೃತ್ತಿಗಳಲ್ಲಿ ಅಗತ್ಯವು ಮಿತಿಯಾಗಿದೆ. ಬೆಂಗಳೂರಿನಲ್ಲಿ ಸ್ವಂತ ಅಂಗಡಿ, ವ್ಯಾಪಾರ ನಡೆಸುತ್ತಿದ್ದವರಿಗೂ ಭವಿಷ್ಯದ ಬಗ್ಗೆ ಆತಂಕ ಶುರುವಾಗಿದೆ. ಈಗಿನ ಕೊರೊನಾ ಭೀತಿ ಯಾವಾಗ ಕೊನೆಯಾಗುತ್ತದೆ ಎಂಬುದೇ ಗೊತ್ತಾಗುತ್ತಿಲ್ಲ. ಕೆಲವು ಐಟಿ, ಬಿಪಿಒ ಕಂಪೆನಿಗಳಿಗಾಗಿ ಕಾರು, ಟೆಂಪೋ ಟ್ರಾವೆಲರ್ ಮತ್ತಿತರ ವಾಹನಗಳನ್ನು ಬಿಟ್ಟಿದ್ದವರಿಗೂ ಈಗ ವ್ಯವಹಾರ ನಿಂತುಹೋಗಿರುವುದರಿಂದ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ.
ಆಕರ್ಷಣೆ ಕಳೆದುಕೊಳ್ಳುತ್ತಿದೆಯಾ?
ಕಟ್ಟಡ ನಿರ್ಮಾಣಗಳಿಗೆ ಅನುಭವಿ- ಕೌಶಲ ಇರುವ ಕೆಲಸಗಾರರು ಸಿಗುತ್ತಿಲ್ಲ. ಈಗ ಸಿಗುತ್ತಿರುವವರು ಹೆಚ್ಚಿನ ಹಣ ಕೇಳುತ್ತಿದ್ದಾರೆ. ಈ ಕಾರಣಕ್ಕೆ ಹೊಸದಾಗಿ ಕೆಲಸ ಶುರು ಮಾಡುವುದಕ್ಕೇ ಜನ ಹಿಂದೆ- ಮುಂದೆ ಆಲೋಚನೆ ಮಾಡುತ್ತಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಬೇಕಾದ ವಸ್ತುಗಳ ಉತ್ಪಾದನೆಯೂ ಕಡಿಮೆ ಆಗಿರುವುದು ಸಹ ಚಿಂತೆಗೆ ಕಾರಣವಾಗಿದೆ. ಮದುವೆ ಇತರ ಸಮಾರಂಭಗಳು ನಡೆಯುತ್ತಿಲ್ಲ. ಅಷ್ಟೇ ಏಕೆ, ಕೆಲ ಸಮುದಾಯಗಳು ಸಂಪ್ರದಾಯಬದ್ಧವಾಗಿ ಮಾಡುತ್ತಿದ್ದ ಅಂತ್ಯ ಸಂಸ್ಕಾರವೂ ಆಗುತ್ತಿಲ್ಲ. ಅಡುಗೆ ಕೆಲಸದವರು ಸೇರಿದಂತೆ ಬೇರೆ ಕೆಲಸದವರಿಗೆ ಸಮಸ್ಯೆಗಳಾಗಿದ್ದು, ತಂತಮ್ಮ ಊರುಗಳಿಗೆ ಹಿಂತಿರುಗಿದ್ದಾರೆ. ಇನ್ನೂ ಮುಂದುವರಿದು ಹೇಳಬೇಕು ಅಂದರೆ, ಸಿನಿಮಾ ರಂಗದಲ್ಲಿ ಇದ್ದ ಕಾರ್ಮಿಕರು ಸಹ ಊರುಗಳಿಗೆ ವಾಪಸಾಗಿದ್ದು, ಫೋನ್ ನಾಟ್ ರೀಚಬಲ್- ಸ್ವಿಚ್ಡ್ ಆಫ್ ಆಗಿದೆ. ಕೊರೊನಾ ತೊಲಗಿ, ಮತ್ತೆ ಸಹಜ ಸ್ಥಿತಿಗೆ ಎಲ್ಲವೂ ಯಾವಾಗ ಮರಳಬಹುದು ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ಈ ಕಾರಣಕ್ಕೇ ಹೇಳಿದ್ದು, ಬೆಂಗಳೂರು ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿದೆಯಾ?
More From GoodReturns

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Mysore Road: ಮೈಸೂರು ರೋಡ್ ಟ್ರಾಫಿಕ್ಗೆ ಆದಷ್ಟು ಬೇಗ ಮುಕ್ತಿ; 810 ಕೋಟಿ ವೆಚ್ಚದಲ್ಲಿ ಬರಲಿದೆ ಈ ಯೋಜನೆ

Ugadi 2026 Wishes: ಈ ವರ್ಷದ ‘ಯುಗಾದಿ’ ಹೊಸ ಬೆಳಕು ತರಲಿ- ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ತಿಳಿಸಿ

Gold Price Bengaluru: ಯುಗಾದಿಗೂ ಮುನ್ನ ಚಿನ್ನದ ಬೆಲೆ ಇಳಿಕೆ; ನಿನ್ನೆಗಿಂತ 3,300 ರೂ. ಕುಸಿತ

Eid Ul-Fitr 2026: ಯುಎಇ, ಕುವೈತ್, ಕತಾರ್ನಲ್ಲಿ ಮೈದಾನ ಪ್ರಾರ್ಥನೆಗೆ ಬ್ರೇಕ್!

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ



Click it and Unblock the Notifications