ಬೆಂಗಳೂರು, ನವೆಂಬರ್ 5: ಐಟಿ ದಿಗ್ಗಜ ಇನ್ಫೋಸಿಸ್ ಕಂಪೆನಿ ಕೂಡ ಕಾಗ್ನಿಜಂಟ್ ಹಾದಿಯಲ್ಲಿ ಸಾಗಿದೆ. ಕಂಪೆನಿಯ ಮಧ್ಯಮ, ಉನ್ನತ ಮಟ್ಟದ ಉದ್ಯೋಗಿಗಳನ್ನು ತೆಗೆದು ಹಾಕುವ ನಿರ್ಧಾರ ಮಾಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಕಂಪೆನಿಯ 10% ಅಥವಾ 2200 ಸಿಬ್ಬಂದಿಯನ್ನು ತೆಗೆದುಹಾಕಲಿದ್ದು, JL 6 ಬ್ಯಾಂಡ್ (ಜಾಬ್ ಲೆವೆಲ್ 6) ಇರುವ ಹಿರಿಯ ಮ್ಯಾನೇಜರ್ ಮಟ್ಟದಲ್ಲಿ ಇರುವವರನ್ನು ಉದ್ಯೋಗದಿಂದ ತೆಗೆಯಲಿದೆ.
JL6, JL7 ಹಾಗೂ JL8 ಬ್ಯಾಂಡ್ ನ 30,092 ಸಿಬ್ಬಂದಿ ಇನ್ಫೋಸಿಸ್ ನಲ್ಲಿ ಇದ್ದಾರೆ. ಇನ್ನು 2ರಿಂದ 5 ಪರ್ಸೆಂಟ್ JL3 ಮತ್ತು ಅದಕ್ಕಿಂತ ಕಡಿಮೆ ಹಂತದವರು ಮತ್ತು ಮಧ್ಯಮ ಮಟ್ಟದ (JL4 ಮತ್ತು J5) ಉದ್ಯೋಗಿಗಳನ್ನು ತೆಗೆಯಲಿದೆ. ಅದನ್ನು ಸಂಖ್ಯೆಗಳಲ್ಲಿ ಹೇಳುವುದಾದರೆ 4,000ದಿಂದ 10,000 ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.
ಇನ್ಫೋಸಿಸ್ ನಲ್ಲಿ 86,558 ಅಸೋಸಿಯೇಟ್ ಮಟ್ಟದವರು ಹಾಗೂ 1.1 ಲಕ್ಷ ಮಧ್ಯಮ ಬ್ಯಾಂಡ್ ನವರು ಕಾರ್ಯ ನಿರ್ವಹಿಸುತ್ತಿದ್ದಾರೆ. 971 ಮಂದಿ ಅಂದರೆ 2ರಿಂದ 5% ಪ್ರಮುಖ ಹುದ್ದೆಯಲ್ಲಿದ್ದಾರೆ. ಹಿರಿಯ ಅಧಿಕಾರಿಗಳು ಇದ್ದು, ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್, ವೈಸ್ ಪ್ರೆಸಿಡೆಂಟ್ಸ್, ಸೀನಿಯರ್ ವೈಸ್ ಪ್ರೆಸಿಡೆಂಟ್ಸ್ ಮತ್ತು ಎಕ್ಸ್ ಕ್ಯೂಟಿವ್ ವೈಸ್ ಪ್ರೆಸಿಡೆಂಟ್ಸ್ ಹುದ್ದೆಯಲ್ಲಿದ್ದಾರೆ. ಅದರರ್ಥ 50 ಮಂದಿ ತನಕ ಎಕ್ಸ್ ಕ್ಯೂಟಿವ್ಸ್ ಇದ್ದಾರೆ. ಅವರನ್ನು ಹುದ್ದೆಯಿಂದ ತೆಗೆಯಲಾಗುತ್ತದೆ.

ಈ ಹಿಂದೆ ಇನ್ಫೋಸಿಸ್ ಕಂಪೆನಿಯಲ್ಲಿ ಆಯಾ ಸಿಬ್ಬಂದಿಯ ಪರ್ಫಾಮೆನ್ಸ್ ಆಧಾರದಲ್ಲಿ ಕೆಲಸದಿಂದ ತೆಗೆಯಲಾಗುತ್ತಿತ್ತು. ಆದರೆ ಈ ಬಾರಿ ಸಂಖ್ಯೆ ದೊಡ್ಡದಿರುತ್ತದೆ. ಮತ್ತು ಆ ಮಾನದಂಡ ಕೂಡ ಬೇರೆ ಇರುತ್ತದೆ ಎಂದು ಮೂಲಗಳು ಹೇಳಿವೆ.
ಇನ್ನು ಇತರ ಮೂಲಗಳ ಪ್ರಕಾರ, ಗ್ರಾಹಕರ ಅಗತ್ಯವೇ ಬೇರೆ ಆಗಿದೆ. ಅಗತ್ಯ ಕೌಶಲಗಳು ಬದಲಾಗಿವೆ. ಆಟೋಮೆಷನ್ ಆಗಿರುವುದರಿಂದ ಮುಂಚಿನ ರೀತಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಬೇಡ. ಆದ್ದರಿಂದ ಈ ಕ್ಷೇತ್ರದಲ್ಲಿನ ಎಲ್ಲ ಕಂಪೆನಿಗಳು ಹೀಗೆ ಮಾಡುತ್ತಿವೆ.
ಹಾಗೆ ನೋಡಿದರೆ ಇನ್ಫೋಸಿಸ್ ನಲ್ಲಿ ಉದ್ಯೋಗ ಕಡಿತ ಎಂಬುದು ಅಷ್ಟೊಂದು ಕೇಳಿಬರುತ್ತಿರಲಿಲ್ಲ. ಆದರೆ ಕಳೆದ ಎರಡು ತ್ರೈಮಾಸಿಕದಿಂದ ಆ ಬಗ್ಗೆ ಮಾತು ಹೆಚ್ಚಾಗಿದೆ ಎನ್ನಲಾಗುತ್ತಿದೆ.
More From GoodReturns

Double Decker Flyover: ಬೆಂಗಳೂರು ಮಂದಿಗೆ ನೆಮ್ಮದಿ ಸುದ್ದಿ; ಬಹುನಿರೀಕ್ಷಿತ ಈ ಫ್ಲೈಓವರ್ ಶೀಘ್ರದಲ್ಲೇ ಆರಂಭ

LPG-Power Cut: ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್! ಮತ್ತೆ ಎದುರಾಗುತ್ತಾ ಕರೆಂಟ್ ಸಮಸ್ಯೆ?

Siddaramaiah: ಹೋಟೆಲ್ ಉದ್ಯಮಿಗಳ ಸಂಕಷ್ಟಕ್ಕೆ ಧ್ವನಿಯಾದ ಸಿಎಂ ಸಿದ್ದರಾಮಯ್ಯ; ಪತ್ರ ಬರೆದು ಮನವಿ

Hosur railway line: ಬೈಯಪ್ಪನಹಳ್ಳಿ-ಹೊಸೂರು ಮಾರ್ಗದ ರೈಲು ಆದಷ್ಟು ಬೇಗ ಆರಂಭ-ಯಾವಾಗೆಂದು ತಿಳಿಯಿರಿ

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ



Click it and Unblock the Notifications