ಈಗಂತೂ ಹಣ ವರ್ಗಾವಣೆ ಮಾಡುವುದು ಬಹಳ ಸುಲಭ. ಉದ್ದುದ್ದದ ಅಕೌಂಟ್ ನಂಬರ್, ಐಎಫ್ಎಸ್ಸಿ ಕೋಡ್ ಹಾಕಿ ಹಣ ವರ್ಗಾವಣೆ ಮಾಡಿದರೆ ಅದು ಸರಿಯಾದ ಅಕೌಂಟ್ ನಂಬರ್ಗೆ ಹೋಗಿದೆಯಾ ಎಂಬ ಅನುಮಾನ ಇದ್ದೇ ಇರುತ್ತಿತ್ತು. ಹಣ ಕಳುಹಿಸಿದ ಅಕೌಂಟ್ ನಂಬರ್ನವರಿಗೆ ಕರೆ ಮಾಡಿ ಹಣ ಬಂದಿದೆಯಾ ಎಂದು ಕೇಳಿ ಖಾತ್ರಿ ಪಡಿಸಿಕೊಳ್ಳಬೇಕಿತ್ತು. ಈಗ ಯುಪಿಐ ತಂತ್ರಜ್ಞಾನ ಬಂದ ಮೇಲೆ ಹಣ ವರ್ಗಾವಣೆ ಸರಾಗವಾಗಿದೆ. ಮೊಬೈಲ್ ನಂಬರ್ ಹಾಕಿ ಹಣ ಕಳುಹಿಸಿದರೆ ಸಾಕು. ಮೊಬೈಲ್ ನಂಬರ್ ಹಾಕಿದಾಗ ಹೆಸರೂ ಪ್ರತ್ಯಕ್ಷವಾಗುವುದರಿಂದ ಬೇರೆಯವರ ಖಾತೆಗೆ ಹಣ ಹೋಗುವ ಸಂಭವ ಕಡಿಮೆಯೂ ಇರುತ್ತದೆ. ಅಷ್ಟು ಅಚ್ಚುಕಟ್ಟಾಗಿದೆ ಇಂದಿನ ಮನಿ ಟ್ರಾನ್ಸ್ಫರ್ ತಂತ್ರಜ್ಞಾನ.
ಭೀಮ್ ಆ್ಯಪ್ ಜೊತೆಗೆ ಈಗ ಪೇಟಿಎಂ, ಫೋನ್ ಪೇ, ಪೇಟಿಎಂ, ಅಮೇಜಾನ್ ಪೇ ಇತ್ಯಾದಿ ಅನೇಕ ಪೇಮೆಂಟ್ ಆ್ಯಪ್ಗಳ ಆಯ್ಕೆ ಇದೆ. ಇಷ್ಟಾಗಿಯೂ ಕೆಲವೊಮ್ಮೆ ನಾವು ತಪ್ಪಾಗಿ ಬೇರೆ ಖಾತೆಗೆ ಹಣ ಕಳುಹಿಸುವುದಿದೆ. ಹಣ ಕಳುಹಿಸಲಾಗುವ ಖಾತೆಯವರ ಹೆಸರು ಸರಿಯಾಗಿ ಗೊತ್ತಿಲ್ಲದಿದ್ದಾಗ ಹೀಗಾಗಬಹುದು. ಇಂಥ ಸಂದರ್ಭದಲ್ಲಿ ನಿಮ್ಮ ಹಣವನ್ನು ವಾಪಸ್ ಪಡೆಯಬಹುದಾ?
ಕಾನೂನು ಏನು ಹೇಳುತ್ತದೆ?
ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸರ್ಕಾರವೇ ಭಾರತ್ ಇಂಟರ್ಫೇಸ್ ಫಾರ್ ಮನಿ (BHIM) ರೂಪಿಸಿದೆ. ಇದರ ನಿಯಮದ ಪ್ರಕಾರ ಒಂದು ವೇಳೆ ನೀವು ತಪ್ಪಾಗಿ ಬೇರೆ ಅಕೌಂಟ್ಗೆ ಹಣ ಕಳುಹಿಸಿದರೆ ವಾಪಸ್ ಪಡೆದುಕೊಳ್ಳಬಹುದೆಂಬ ಖಾತ್ರಿ ಇಲ್ಲ. ನೀವು ಹಣ ಕಳುಹಿಸಲಾಗುವ ಖಾತೆಯ ಮಾಲೀಕರನ್ನು ಸಂಪರ್ಕಿಸಿ ಮನವಿ ಮಾಡಿಕೊಂಡು ಹಣ ವಾಪಸ್ ಪಡೆದುಕೊಳ್ಳಬೇಕು ಅಷ್ಟೇ.
ಆದ್ದರಿಂದ ಹಣ ಕಳುಹಿಸುವ ಮುನ್ನ ಮೊಬೈಲ್ ನಂಬರ್ ಮತ್ತು ಆನಂತರ ಕಾಣುವ ಖಾತೆದಾರರ ಹೆಸರನ್ನು ಪರಿಶೀಲಿಸಿ ಹಣ ಕಳುಹಿಸುವುದು ಉತ್ತಮ. ಕೆಲವೊಮ್ಮೆ ಹೆಸರು ಒಂದೇ ತೆರನಾಗಿರುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ, ನೀವು ಮೊದಲ ಬಾರಿಗೆ ಒಬ್ಬರಿಗೆ ಹಣ ಕಳುಹಿಸುವುದಿದ್ದರೆ ಸಣ್ಣ ಮೊತ್ತವನ್ನು ಮೊದಲು ಕಳುಹಿಸಿ. ಅದು ತಲುಪಿದೆ ಎಂದು ಖಾತ್ರಿಯಾದ ಬಳಿಕ ಎಲ್ಲಾ ಹಣವನ್ನು ವರ್ಗಾವಣೆ ಮಾಡಬಹುದು.
ದೂರು ಕೊಡುವ ಅವಕಾಶ ಇದೆ
ನಿಯಮಗಳ ಪ್ರಕಾರ ನೀವು ಯುಪಿಐ ಐಡಿ ಮೂಲಕ ಕಳುಹಿಸಲಾಗುವ ಹಣವನ್ನು ಮರಳಿ ಪಡೆಯುವ ಖಾತ್ರಿ ಇಲ್ಲವಾದರೂ ದೂರು ಕೊಡುವ ಅವಕಾಶವಂತೂ ಇದೆ. ಭೀಮ್, ಪೇಟಿಎಂ, ಫೋನ್ ಪೇ ಇತ್ಯಾದಿ ಆ್ಯಪ್ಗಳಲ್ಲಿ ದೂರಿನ ಅವಕಾಶ ಇದೆ. ಈ ಆ್ಯಪ್ಗಳಲ್ಲಿರುವ ಕಸ್ಟಮರ್ ಸಪೋರ್ಟ್ ಅನ್ನು ಸಂಪರ್ಕಿಸಿ ದೂರು ಕೊಡಬಹುದು. ಭೀಮ್ ಆ್ಯಪ್ನಲ್ಲಿ ಹೆಲ್ಪ್ಲೈನ್ ನಂಬರ್ ೧೮೦೦೧೨೦೧೭೪೦ ಅನ್ನು ಸಂಪರ್ಕಿಸಬಹುದು.
ಬ್ಯಾಂಕ್ ಸಂಪರ್ಕಿಸಿ
ನೀವು ತಪ್ಪಾಗಿ ಹಣ ಕಳುಹಿಸಿದ್ದು ಗಮನಕ್ಕೆ ಬಂದ ಕೂಡಲೇ ಟ್ರಾನ್ಸಾಕ್ಷನ್ನ ಸ್ಕ್ರೀನ್ಶಾಟ್ ತೆಗೆದುಕೊಳ್ಳಿ. ನೀವು ಹಣ ಕಳುಹಿಸಿದ ಖಾತೆ ನಂಬರ್ನ ಬ್ಯಾಂಕ್ ಅನ್ನು ಸಂಪರ್ಕಿಸಬೇಕು. ಬ್ಯಾಂಕ್ನ ಆ ಶಾಖೆಯ ಮ್ಯಾನೇಜರ್ ಅವರನ್ನೇ ಖುದ್ದಾಗಿ ಭೇಟಿ ಮಾಡುವುದಿದ್ದರೆ ಆಗಬಹುದು. ನೀವು ಶೀಘ್ರವಾಗಿ ಬ್ಯಾಂಕ್ ಸಂಪರ್ಕಿಸಿದಷ್ಟೂ ನಿಮ್ಮ ಹಣ ಮರಳಿಪಡೆಯುವ ಪ್ರಯತ್ನ ಸಫಲವಾಗುವ ಅವಕಾಶ ಇರುತ್ತದೆ.
More From GoodReturns

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ

Karnataka: ಕರ್ನಾಟಕ ಕೈಗಾರಿಕೆಯಲ್ಲಿ ಹೊಸ ಕ್ರಾಂತಿ…ಏರೋಸ್ಪೇಸ್, ರಕ್ಷಣಾ, EV ಮತ್ತು ಹಸಿರು ಇಂಧನದಲ್ಲಿ ನೂತನ ದಿಕ್ಕು!



Click it and Unblock the Notifications